ಶ್ರೀಕಾಕುಳಂನ ನಕ್ಸಲೀಯನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗುವ ಪಾತ್ರದಲ್ಲಿ ಚಿರು ನಟಿಸಲಿದ್ದಾರೆ. ಕೊರಟಾಳ ಶಿವ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಯುವ ನಕ್ಸಲೈಟ್ ಪಾತ್ರದಲ್ಲಿ ಚಿರಂಜೀವಿ ನಟಿಸಬೇಕಾಗಿತ್ತು. ಆದರೆ, ಇದೀಗ ಆ ಪಾತ್ರವನ್ನು ಅವರ ಪುತ್ರ ರಾಮ್ ಚರಣ್ ನಿರ್ವಹಿಸಲಿದ್ದಾರೆ. ಚಿರಂಜೀವಿಗೆ ಎದುರು ನಾಯಕಿಯಾಗಿ ತಮಿಳು ನಟಿ ತ್ರಿಷಾ ನಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.