ಫೇಸ್ಬುಕ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಸನಲ್, ನಟಿಯ ಪ್ರಾಣಕ್ಕೆ ಅಪಾಯವಿದೆ. ಆಕೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿದ್ದಾಳೆ ಎಂದಿದ್ದರು. ಅಲ್ಲದೆ ಆಕೆಯ ಇಬ್ಬರು ವ್ಯವಸ್ಥಾಪಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಜತೆಗೆ ಇತ್ತೀಚಿಗೆ ತೃತೀಯ ಲಿಂಗಿಯೊಬ್ಬರ ಸಾವಿನ ಬಳಿಕ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವನ್ನೂ ಹಂಚಿಕೊಂಡಿದ್ದಾರೆ.