ಕರಪತ್ರ ವಿತರಣೆ: ಕೆಜಿಎಫ್ ನಗರವನ್ನು ರೌಡಿಗಳು, ಕ್ರೂರ ಸ್ವಭಾವದವರು, ದೊಂಬಿಕೋರರು, ರಕ್ತ ಪಿಶಾಚಿಗಳು ಎಂಬ ರೀತಿಯಲ್ಲಿ ಕೆಟ್ಟದಾಗಿ ಚಿತ್ರೀಕರಣ ಮಾಡಿ, ನಗರದ ಮರ್ಯಾದೆಗೆ ಕುಂದು ತರುವ ಪ್ರಯತ್ನ ನಡೆದಿದೆ. ಇದರಿಂದಾಗಿ ನಗರದ ಯುವಕರಿಗೆ ಇತರ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅನಾಮಧೇಯ ಕರಪತ್ರಗಳು ನಗರದಲ್ಲಿ ಹಂಚಲ್ಪಡುತ್ತಿವೆ.