ಅಂದಹಾಗೆ, ಮೊದಲಿಗೆ ಆ ಹಾಡನ್ನು ಹಿಂದಿಯ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಹಾಡಿದ್ದರಂತೆ. ಆದರೆ, ಅವರ ಹಾಡುಗಾರಿಕೆ ಸುದೀಪ್ ಅವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಹಾಗಾಗಿ, ಆ ಹಾಡನ್ನು ಮತ್ತೆ ರಾಜೇಶ್ ಕೃಷ್ಣನ್ ಅವರಿಂದ ಹಾಡಿಸಲು ಸುದೀಪ್ ನಿಶ್ಚಯಿಸಿದ್ದರು. ಅಂದು ಚಿತ್ರರಂಗದಲ್ಲಿ ಅಷ್ಟಾಗಿ ಹೆಸರು ಮಾಡಿರದ ಸುದೀಪ್ ಅವರ ಮಾತಿಗೆ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರಿಗೆ ಸಮ್ಮತ ಇರಲಿಲ್ಲ. ಹಲವು ಬಾರಿ ಮನವಿ ಮಾಡಿ ರಾಜೇಶ್ ರಾಮನಾಥ್ ಅವರನ್ನು ಕಾಡಿ ಬೇಡಿ ಆ ಹಾಡನ್ನು ಮತ್ತೆ ರಾಜೇಶ್ ಕೃಷ್ಣನ್ ಅವರಿಂದ ಹಾಡಿಸಲು ಒಪ್ಪಿಸಿದರಂತೆ.