<p>ಒಂದು ಕೊಲೆಯ ಸುತ್ತ ನಡೆಯುವ ಕಥೆಯನ್ನು ಹೊಂದಿರುವ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಹುತೇಕ ರಂಗಭೂಮಿ ಕಲಾವಿದರೇ ಸೇರಿ ಸಿದ್ಧಗೊಳಿಸಿರುವ ಈ ಚಿತ್ರಕ್ಕೆ ಸುಂದರ್ ಎಸ್. ನಿರ್ದೇಶನವಿದೆ.</p><p>‘ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಕಂಡು ನಾವೆಲ್ಲ ಕಥೆ ಮಾಡಿಕೊಂಡಿದ್ದೆವು. ಎಲ್ಲ ಒಟ್ಟಾಗಿ ಕುಳಿತು ಚರ್ಚಿಸುವಾಗ ನನ್ನ ಕಥೆ ಆಯ್ಕೆಯಾಯಿತು. ಕೊಲೆಯ, ಅಪರಾಧ ಜಗತ್ತಿನ ಕುತೂಹಲಕಾರಿ ಕಥೆ. ಚಿತ್ರೀಕರಣ ಮುಗಿದಿದ್ದು, ಅಕ್ಟೊಬರ್ 18ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.</p><p>ಚಿಂತನ್ ಕಂಬಣ್ಣ ಬಂಡವಾಳ ಹೂಡಿದ್ದಾರೆ. ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಹೀನ್ ಕುಬೇರ್, ಮುತ್ತುರಾಜ್ ಟಿ, ಗಗನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.</p><p>ಚಿತ್ರಕ್ಕೆ ಶಿವೋಂ ಸಂಗೀತ, ಮೋಹನ ಎಂ.ಎಸ್ ಮತ್ತು ಜಗದೀಶ್ ಛಾಯಾಚಿತ್ರಗ್ರಹಣ, ನಾನಿ ಕೃಷ್ಣ ಸಂಕಲನವಿದೆ. ಬೆಂಗಳೂರು ಮತ್ತು ಕನಕಪುರದ ಸುತ್ತಮುತ್ತ ಚಿತ್ರೀಕರಣಗೊಂಡಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಂದು ಕೊಲೆಯ ಸುತ್ತ ನಡೆಯುವ ಕಥೆಯನ್ನು ಹೊಂದಿರುವ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಹುತೇಕ ರಂಗಭೂಮಿ ಕಲಾವಿದರೇ ಸೇರಿ ಸಿದ್ಧಗೊಳಿಸಿರುವ ಈ ಚಿತ್ರಕ್ಕೆ ಸುಂದರ್ ಎಸ್. ನಿರ್ದೇಶನವಿದೆ.</p><p>‘ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಕಂಡು ನಾವೆಲ್ಲ ಕಥೆ ಮಾಡಿಕೊಂಡಿದ್ದೆವು. ಎಲ್ಲ ಒಟ್ಟಾಗಿ ಕುಳಿತು ಚರ್ಚಿಸುವಾಗ ನನ್ನ ಕಥೆ ಆಯ್ಕೆಯಾಯಿತು. ಕೊಲೆಯ, ಅಪರಾಧ ಜಗತ್ತಿನ ಕುತೂಹಲಕಾರಿ ಕಥೆ. ಚಿತ್ರೀಕರಣ ಮುಗಿದಿದ್ದು, ಅಕ್ಟೊಬರ್ 18ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.</p><p>ಚಿಂತನ್ ಕಂಬಣ್ಣ ಬಂಡವಾಳ ಹೂಡಿದ್ದಾರೆ. ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಹೀನ್ ಕುಬೇರ್, ಮುತ್ತುರಾಜ್ ಟಿ, ಗಗನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.</p><p>ಚಿತ್ರಕ್ಕೆ ಶಿವೋಂ ಸಂಗೀತ, ಮೋಹನ ಎಂ.ಎಸ್ ಮತ್ತು ಜಗದೀಶ್ ಛಾಯಾಚಿತ್ರಗ್ರಹಣ, ನಾನಿ ಕೃಷ್ಣ ಸಂಕಲನವಿದೆ. ಬೆಂಗಳೂರು ಮತ್ತು ಕನಕಪುರದ ಸುತ್ತಮುತ್ತ ಚಿತ್ರೀಕರಣಗೊಂಡಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>