ಕಥೆ ಮತ್ತು ನಿರ್ದೇಶನದ ಕೆಲಸ ರವಿ ಸಾಸನೂರ್ ಅವರದ್ದು. ಜುವಿನ್ ಸಿಂಗ್ ಸಂಗೀತ, ಆನಂದು ಚಂದ್ರಸಬು ಛಾಯಾಗ್ರಹಣ ಚಿತ್ರಕ್ಕಿದೆ. ‘ಇಂದಿನ ಯುವ ಪೀಳಿಗೆಯ ಮನಸ್ಸಿಗೆ ನಾಟುವಂತಹ, ನೈಜ ಘಟನೆ ಆಧಾರಿತ ಕಮರ್ಷಿಯಲ್ ಚಿತ್ರ ಇದು’ ಎಂದು ಸಿನಿತಂಡ ಹೇಳಿದೆಯಾದರೂ, ಕಥೆಯ ಎಳೆಯನ್ನು ಗುಟ್ಟಾಗಿಯೇ ಇರಿಸಿದೆ. ಈ ಚಿತ್ರವು ಶೀಘ್ರವೇ ತೆರೆಗೆ ಬರುವ ನಿರೀಕ್ಷೆ ಇದೆ.