‘ಬೆಂಗಳೂರಿನಲ್ಲಿ ಹದಗೆಟ್ಟಿರುವ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ತಮ್ಮ ಗಮನಸೆಳೆಯಲು ಈ ಪತ್ರ ಬರೆದಿದ್ದೇನೆ. ನಗರದ ಬಹುತೇಕ ರಸ್ತೆಗಳು ಕಸದ ತೊಟ್ಟಿಯಾಗಿದ್ದು, ನಗರದ ಸೌಂದರ್ಯವನ್ನು ಕೆಡಿಸುವುದಲ್ಲದೆ ಜನರ ಆರೋಗ್ಯಕ್ಕೂ ಇವು ಹಾನಿಕರವಾಗಿದೆ. ಕಸ ಸುರಿದಿರುವ ಚಿತ್ರಗಳನ್ನು ಅಪ್ಲೋಡ್ ಮಾಡಿದ ಬಳಿಕ ಬಿಬಿಎಂಪಿ ಆ ಸ್ಥಳಗಳನ್ನು ಸ್ವಚ್ಛ ಮಾಡುತ್ತಿದೆ. ಆದರೆ ಕೆಲ ದಿನಗಳಲ್ಲಿ ಅದೇ ಸ್ಥಳ ಮತ್ತೆ ಕಸದ ತೊಟ್ಟಿಯಾಗುತ್ತಿದೆ. ಈ ಅಭಿಯಾನದ ಜೊತೆಗೆ ಪಾದಚಾರಿ ಮಾರ್ಗದ ಒತ್ತುವರಿ, ತಡೆಗೋಡೆಗಳಿಲ್ಲದ ಟ್ರಾನ್ಸ್ಫಾರ್ಮರ್ಗಳ ಬಗ್ಗೆ #ಸುರಕ್ಷತೆಗಾಗಿನಾನೂಸಹಭಾಗಿ ಮತ್ತು #ಸೌಂದರ್ಯಕ್ಕಾಗಿನಾನೂಸಹಭಾಗಿ ಎಂಬ ಅಭಿಯಾನವನ್ನೂ ನಾನು ಆರಂಭಿಸಿದ್ದೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಅಗತ್ಯವಿದ್ದು, ಪ್ರತ್ಯೇಕ ಸಚಿವಾಲಯಗಳಿದ್ದರಷ್ಟೇ ಇವು ಸಾಧ್ಯ’ ಎಂದು ಅನಿರುದ್ಧ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.