<p>ಜಗತ್ತಿನಲ್ಲೇ ಮೊಟ್ಟಮೊದಲಪ್ರಯೋಗವೆನ್ನುವಂತೆಛಾಯಾಗ್ರಾಹಕ ಮತ್ತುನಿರ್ಮಾಪಕರನ್ನು ಹೂರತುಪಡಿಸಿ ಉಳಿದ ಎಲ್ಲ ವಿಭಾಗದಲ್ಲೂಮಕ್ಕಳೇಸೇರಿಕೊಂಡು ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆ ‘ನಿರ್ಮಲ’ ಚಿತ್ರದ್ದು. ಇದೊಂದು ರೀತಿಯಲ್ಲಿಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಮಾಡಿದ ಸಿನಿಮಾ ಎನ್ನಬಹುದು. ಇದು ಸದ್ಯದಲ್ಲೇ ತೆರೆಗೆ ಬರುವ ನಿರೀಕ್ಷೆ ಇದೆ.</p>.<p>ಪ್ರಧಾನಮಂತ್ರಿ ಸ್ವಚ್ಛ ಭಾರತ ಅಭಿಯಾನ ಮತ್ತು ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸುವ ಸಂದೇಶವನ್ನು ಈ ಚಿತ್ರದಲ್ಲಿ ಸಾರಲಾಗಿದೆಯಂತೆ. ಜತೆಗೆ ಸಾಮಾಜಿಕ ಕಾಳಜಿಯ ಸಂದೇಶವೂ ಇದರಲ್ಲಿದೆಯಂತೆ.ಇವೆಲ್ಲವನ್ನೂಮಕ್ಕಳು ಹೇಗೆ ಸಾಧಿಸಿ ತೋರಿಸುತ್ತಾರೆ ಎನ್ನುವುದು ಚಿತ್ರದ ಕುತೂಹಲ. ಅದಕ್ಕಾಗಿ ‘ಮುಗ್ಧ ಮನಸುಗಳ ಕನಸು’ ಎಂಬ ಅಡಿಬರಹವನ್ನೂ ಚಿತ್ರಕ್ಕೆ ನೀಡಲಾಗಿದೆ. ಈ ಚಿತ್ರದಲ್ಲಿ ತೊಡಗಿರುವ ಮಕ್ಕಳೆಲ್ಲರೂ14ರಿಂದ 15ರ ವಯೋಮಾನದವರು. ಎಲ್ಲರೂ ಸೂಕ್ತ ತರಬೇತಿ ಪಡೆದುಕೊಂಡೇ ಚಿತ್ರರಂಗಕ್ಕೆ ಅಡಿ ಇಟ್ಟಿರುವುದು ಅವರ ಮಾತು ಮತ್ತು ಕೃತಿಯಲ್ಲಿ ಕಾಣಿಸುತ್ತಿತ್ತು.</p>.<p>ಗ್ರಾಮೀಣ ಸೊಗಡಿನ ಮತ್ತು ನಗರದ ಆಟಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವ ಎರಡು ಹಾಡುಗಳಿಗೆ ರವಿ ಸಾಹಿತ್ಯ ಬರೆದಿದ್ದಾರೆ. ವರ್ಣ ಶ್ರೀಮುರೂರು ಸಂಗೀತ ಸಂಯೋಜಿಸಿದ್ದು,ಸರಿಗಮಮ ಖ್ಯಾತಿಯ ಜ್ಯೋತಿಕಾ ಹಾಗೂ ನಿಖಿತಾ ಹಾಡಿದ್ದಾರೆ.</p>.<p>ನಿರ್ದೇಶನ ಲೋಹಿತ್ ಪ್ರಕಾಶ್, ಸಂಕಲನ ಲೋಹಿತ್ ಚಂದನ್, ನೃತ್ಯ ಸಂಯೋಜನೆ ಭಾವನಾ ನಾಯಕ್, ಪ್ರಚಾರ ಕಲೆ ಅಂಕಿತಾ ನಾಯ್ಡು, ಕಲಾ ನಿರ್ದೇಶನ ಮಿಥಿಲೇಶ್-ಆರ್ಯನ್, ವಸ್ತ್ರಾಲಂಕಾರ ಪುಣ್ಯಶ್ರೀ ಅವರದ್ದು. ಛಾಯಾಗ್ರಹಣ ವಿ.ಪವನ್ಕುಮಾರ್, ನಿರ್ಮಾಣ ಬಿ.ಎಚ್.ಉಲ್ಲಾಸ್ಗೌಡ-ಅವಿನಾಶ್ ಅವರದ್ದು.</p>.<p>ಉಲ್ಲಾಸ್ ರಂಗಭೂಮಿ ಶಾಲೆಯ ಮಕ್ಕಳು ಚಿತ್ರದಲ್ಲಿ ತಂತ್ರಜ್ಞ,ಕಲಾವಿದರಾಗಿಗುರುತಿಸಿಕೊಂಡಿದ್ದಾರೆ. ರಾಮನಗರ, ಚನ್ನಪಟ್ಟಣ, ಬಿಡದಿ ಭಾಗಗಳಲ್ಲಿ ಒಂದೇ ಹಂತದಲ್ಲಿ ಚಿತ್ರದಚಿತ್ರೀಕರಣ ನಡೆಸಲಾಗಿದೆ.</p>.<p>ಚಿತ್ರದ ಟ್ರೇಲರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಅಮೆರಿಕದಲ್ಲಿ ನೆಲೆಸಿರುವದೀಪಕ್-ಸವಿತಾರಾವ್ ದಂಪತಿ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಗತ್ತಿನಲ್ಲೇ ಮೊಟ್ಟಮೊದಲಪ್ರಯೋಗವೆನ್ನುವಂತೆಛಾಯಾಗ್ರಾಹಕ ಮತ್ತುನಿರ್ಮಾಪಕರನ್ನು ಹೂರತುಪಡಿಸಿ ಉಳಿದ ಎಲ್ಲ ವಿಭಾಗದಲ್ಲೂಮಕ್ಕಳೇಸೇರಿಕೊಂಡು ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆ ‘ನಿರ್ಮಲ’ ಚಿತ್ರದ್ದು. ಇದೊಂದು ರೀತಿಯಲ್ಲಿಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಮಾಡಿದ ಸಿನಿಮಾ ಎನ್ನಬಹುದು. ಇದು ಸದ್ಯದಲ್ಲೇ ತೆರೆಗೆ ಬರುವ ನಿರೀಕ್ಷೆ ಇದೆ.</p>.<p>ಪ್ರಧಾನಮಂತ್ರಿ ಸ್ವಚ್ಛ ಭಾರತ ಅಭಿಯಾನ ಮತ್ತು ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸುವ ಸಂದೇಶವನ್ನು ಈ ಚಿತ್ರದಲ್ಲಿ ಸಾರಲಾಗಿದೆಯಂತೆ. ಜತೆಗೆ ಸಾಮಾಜಿಕ ಕಾಳಜಿಯ ಸಂದೇಶವೂ ಇದರಲ್ಲಿದೆಯಂತೆ.ಇವೆಲ್ಲವನ್ನೂಮಕ್ಕಳು ಹೇಗೆ ಸಾಧಿಸಿ ತೋರಿಸುತ್ತಾರೆ ಎನ್ನುವುದು ಚಿತ್ರದ ಕುತೂಹಲ. ಅದಕ್ಕಾಗಿ ‘ಮುಗ್ಧ ಮನಸುಗಳ ಕನಸು’ ಎಂಬ ಅಡಿಬರಹವನ್ನೂ ಚಿತ್ರಕ್ಕೆ ನೀಡಲಾಗಿದೆ. ಈ ಚಿತ್ರದಲ್ಲಿ ತೊಡಗಿರುವ ಮಕ್ಕಳೆಲ್ಲರೂ14ರಿಂದ 15ರ ವಯೋಮಾನದವರು. ಎಲ್ಲರೂ ಸೂಕ್ತ ತರಬೇತಿ ಪಡೆದುಕೊಂಡೇ ಚಿತ್ರರಂಗಕ್ಕೆ ಅಡಿ ಇಟ್ಟಿರುವುದು ಅವರ ಮಾತು ಮತ್ತು ಕೃತಿಯಲ್ಲಿ ಕಾಣಿಸುತ್ತಿತ್ತು.</p>.<p>ಗ್ರಾಮೀಣ ಸೊಗಡಿನ ಮತ್ತು ನಗರದ ಆಟಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವ ಎರಡು ಹಾಡುಗಳಿಗೆ ರವಿ ಸಾಹಿತ್ಯ ಬರೆದಿದ್ದಾರೆ. ವರ್ಣ ಶ್ರೀಮುರೂರು ಸಂಗೀತ ಸಂಯೋಜಿಸಿದ್ದು,ಸರಿಗಮಮ ಖ್ಯಾತಿಯ ಜ್ಯೋತಿಕಾ ಹಾಗೂ ನಿಖಿತಾ ಹಾಡಿದ್ದಾರೆ.</p>.<p>ನಿರ್ದೇಶನ ಲೋಹಿತ್ ಪ್ರಕಾಶ್, ಸಂಕಲನ ಲೋಹಿತ್ ಚಂದನ್, ನೃತ್ಯ ಸಂಯೋಜನೆ ಭಾವನಾ ನಾಯಕ್, ಪ್ರಚಾರ ಕಲೆ ಅಂಕಿತಾ ನಾಯ್ಡು, ಕಲಾ ನಿರ್ದೇಶನ ಮಿಥಿಲೇಶ್-ಆರ್ಯನ್, ವಸ್ತ್ರಾಲಂಕಾರ ಪುಣ್ಯಶ್ರೀ ಅವರದ್ದು. ಛಾಯಾಗ್ರಹಣ ವಿ.ಪವನ್ಕುಮಾರ್, ನಿರ್ಮಾಣ ಬಿ.ಎಚ್.ಉಲ್ಲಾಸ್ಗೌಡ-ಅವಿನಾಶ್ ಅವರದ್ದು.</p>.<p>ಉಲ್ಲಾಸ್ ರಂಗಭೂಮಿ ಶಾಲೆಯ ಮಕ್ಕಳು ಚಿತ್ರದಲ್ಲಿ ತಂತ್ರಜ್ಞ,ಕಲಾವಿದರಾಗಿಗುರುತಿಸಿಕೊಂಡಿದ್ದಾರೆ. ರಾಮನಗರ, ಚನ್ನಪಟ್ಟಣ, ಬಿಡದಿ ಭಾಗಗಳಲ್ಲಿ ಒಂದೇ ಹಂತದಲ್ಲಿ ಚಿತ್ರದಚಿತ್ರೀಕರಣ ನಡೆಸಲಾಗಿದೆ.</p>.<p>ಚಿತ್ರದ ಟ್ರೇಲರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಅಮೆರಿಕದಲ್ಲಿ ನೆಲೆಸಿರುವದೀಪಕ್-ಸವಿತಾರಾವ್ ದಂಪತಿ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>