ಕಳೆದ ಜೂನ್ನಲ್ಲಿ ಟಾಲಿವುಡ್ ನಟ ಪ್ರಭಾಸ್ ‘ಗ್ರೀನ್ ಇಂಡಿಯಾ ಚಾಲೆಂಜ್’ ಸ್ವೀಕರಿಸಿದ್ದು ಎಲ್ಲರಿಗೂ ತಿಳಿದಿದೆ. ಸಂಸದ ಜೆ. ಸಂತೋಷ್ಕುಮಾರ್ ಅವರ ಆಹ್ವಾನದ ಮೇರೆಗೆ ಅವರು ಈ ಸವಾಲು ಸ್ವೀಕರಿಸಿದ್ದರು. ತನ್ನ ಮನೆ ಅಂಗಳದಲ್ಲಿ ಗಿಡಗಳನ್ನೂ ನೆಟ್ಟಿದ್ದರು. ಬಳಿಕ ರಾಮ್ ಚರಣ್, ರಾನಾ ದಗ್ಗುಬಾಟಿ, ಶ್ರದ್ಧಾ ಕಪೂರ್ ಅವರನ್ನೂ ಈ ಚಾಲೆಂಜ್ಗೆ ನಾಮಿನೇಟ್ ಮಾಡಿದ್ದು ಉಂಟು.