ಅಂದಹಾಗೆ ಅಭಿಮಾನಿಗಳಿಗೆ ಅಪ್ಪು ಉಪಯುಕ್ತ ಸಲಹೆಯನ್ನೂ ನೀಡಿದ್ದಾರೆ. ‘ಹಾರ, ಕೇಕ್, ಹೂಗುಚ್ಛಗಳನ್ನು ತರಬೇಡಿ. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತೀರಿ. ಪ್ರೀತಿ, ವಿಶ್ವಾಸದಿಂದ ಅದನ್ನು ತಂದಿರುತ್ತೀರಿ. ಅದು ನನಗೆ ತಲುಪದೇ ಇದ್ದಾಗ ನಿಮಗೆ ಬೇಸರವಾಗುತ್ತದೆ. ನೀವು ಎಲ್ಲಿಂದಲೋ ಬಂದು ನನ್ನನ್ನು ನೋಡಿಕೊಂಡು ಹೋಗುವುದೇ ನನಗೆ ದೊಡ್ಡ ಉಡುಗೊರೆ. ನನ್ನ ಜೀವನದಲ್ಲಿ ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅದೇ ನನಗೆ ನೀವು ನೀಡುವ ದೊಡ್ಡ ಗಿಫ್ಟ್. ಹಾಗಾಗಿ, ಆ ಹಣವನ್ನು ನೀವೇ ಒಳ್ಳೆಯ ಕಾರ್ಯಕ್ಕೆ ಖರ್ಚು ಮಾಡಿಕೊಳ್ಳಿ. ಇಷ್ಟು ವರ್ಷಗಳ ಕಾಲ ನೀವು ನಮ್ಮನ್ನು ಬೆಳೆಸಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂದು ಅಪ್ಪು ಟ್ವೀಟರ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.