ಈ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, ‘ರಿಚರ್ಡ್ ಆಂಟನಿ’ ಉಳಿದವರು ಕಂಡಂತೆ ಚಿತ್ರದ ಎರಡನೇ ಅಧ್ಯಾಯ ಎನ್ನಬಹುದು. ಆದರೆ ಇದು ಸಂಪೂರ್ಣ ವಿಭಿನ್ನವೂ ಹೌದು. ಬಹಳ ವರ್ಷಗಳ ಹಿಂದೆ, ನಾನು ಉಳಿದವರು ಕಂಡಂತೆ ಬರೆದಾಗ ನನಗೆ ಕಿಂಚಿತ್ತೂ ಆಲೋಚನೆ ಇರಲಿಲ್ಲ ಮುಂದೊಂದು ದಿನ ಇದರ ಇನ್ನೊಂದು ಭಾಗ ಸ್ವತಃ ನಾನೇ ಮಾಡುತ್ತೇನೆ ಎಂದು. ಆದರೆ ಇವತ್ತು ಮತ್ತೆ ಕೈಗೆತ್ತಿಕೊಂಡಾಗ ಅನಿಸಿದ್ದು ಏನೆಂದರೆ, ಇದು ಅಂದೇ ಮೊಳಕೆಯೊಡೆದ ಪ್ರಬಂಧದ ನಿರ್ಣಯ. ಆಗ ಗಿಡದ ಎಲೆಯಷ್ಟು ಕಥೆಯನ್ನು ತೆರೆಯ ಮೇಲೆ ತರಲು ಅವಕಾಶ ನೀಡಿತ್ತು. ಕಥೆಗೆ ತಾಳ್ಮೆ ಬಹುಶಃ ಜಾಸ್ತಿ ಅನಿಸುತ್ತೆ, ಈಗ ಮರದ ಕೊಂಬೆಯಷ್ಟು ಹೇಳಲು ನನ್ನನ್ನು ತಯಾರು ಮಾಡಿದೆ. ಹೌದು ಮುಂದಿನ ಅಧ್ಯಾಯವನ್ನು ಆರಂಭ ಮಾಡುವ ಸಮಯ ಬಂದಾಗಿದೆ. ಆ ಅಧ್ಯಾಯದ ಒಂದು ಭಾಗವೇ , ‘ಮರುಬಂದನು ಅಲೆಗಳ ಜೊತೆ, ಕೆಂಪಾದವು ಕಡಲ ತೀರದ ಕಥೆ’ ಎಂದು ಹೇಳಿದ್ದಾರೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.