ಉತ್ತರ ಕರ್ನಾಟಕದ ಪ್ರತಿಭೆ ನವೀನ್ ಶಂಕರ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಪ್ರಾಮಿಸಿಂಗ್ ಆ್ಯಕ್ಟರ್ ಎಂದು ಗುರುತಿಸಿಕೊಂಡಿದ್ದಾರೆ. ಗುಲ್ಟು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನವೀನ್ ಶಂಕರ್ ಸಾಲು ಸಾಲು ಉತ್ತಮ ಚಿತ್ರಗಳಲ್ಲಿ ನಟಿಸಿ ಚಿರಪರಿಚಿತರಾಗಿದ್ದಾರೆ. ವಿಲನ್ ಅಥವಾ ಹೀರೊ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ಈಗ ಕ್ಷೇತ್ರಪತಿ ಚಿತ್ರದ ಮೂಲಕ ಮತ್ತೊಮ್ಮೆ ಜನರನ್ನು ರಂಜಿಸಲಿದ್ದಾರೆ.