ಈ ಸಿನಿಮಾ ವಿಶ್ವಾಸ್ ಅವರ ಬಯೋಪಿಕ್ ಅಲ್ಲ. ಅವರ ಬದುಕಿನಲ್ಲಿ ನಡೆದ ಕೆಲವು ಘಟನೆಗಳನ್ನು ದೃಶ್ಯರೂಪದಲ್ಲಿ ಜನರ ಮುಂದಿಡುವುದೇ ನಿರ್ದೇಶಕ ರಾಜಕುಮಾರ್ ಅವರ ಉದ್ದೇಶವಂತೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿರುವ ಅವರು, ಎರಡು ಗೀತೆಗಳಿಗೆ ಸಾಹಿತ್ಯ ಕೂಡ ರಚಿಸಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಹದಿನೈದು ವರ್ಷಗಳ ಕಾಲ ಕನ್ನಡ, ತೆಲುಗು, ತಮಿಳಿನ ಹಲವು ನಿರ್ದೇಶಕರ ಬಳಿ ದುಡಿದ ಅನುಭವ ಅವರಿಗಿದೆ.