ಚಿತ್ರ ನಿರ್ದೇಶನದ ಬಿಡುವಿನ ವೇಳೆಯಲ್ಲಿ ಸುಸ್ಥಿರ ಕೃಷಿಯಲ್ಲಿ ತೊಡಗಿಸಿಕೊಂಡು ಪರಿಸರ, ಪ್ರಾಣಿ, ಪಕ್ಷಿಗಳೊಂದಿಗೆ ಬದುಕಬೇಕು ಎನ್ನುವ ಉದ್ದೇಶದೊಂದಿಗೆ ಮಾಗಡಿ ಸಮಿಪ ತೋಟ ಮಾಡಲು ಹೊರಟಿರುವುದಾಗಿ ತಿಳಿಸಿದ ಶಿವಮಣಿ ಅವರು, ನಮ್ಮ ತಂದೆ ಕೇರಳದಲ್ಲಿ ಗೋಡಂಬಿ ಕೃಷಿಕರಾಗಿದ್ದರು. ಆದರೆ ಬೆಂಗಳೂರಿಗೆ ಬಂದ ನಂತರ ಕೃಷಿಯಿಂದ ತುಂಬಾ ದೂರ ಬಂದಿದ್ದೆವು. ಈಗ ಮತ್ತೆ ಮಣ್ಣಿನೊಂದಿಗೆ ನಿಕಟ ಸಂಪರ್ಕದಲ್ಲಿ ಇರಬೇಕು ಎನ್ನುವ ಆಸೆ ಚಿಗುರಿದೆ. ಕೊರೊನಾ ಲಾಕ್ಡೌನ್ ನಂತರ ನಗರದಲ್ಲಿ ಬಹುತೇಕ ಜನ ಕೃಷಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’ ಎಂದರು.