<p>ಹಿಂದೆ ಎರಡೇ ಪಾತ್ರಗಳನ್ನು ಇಟ್ಟುಕೊಂಡು, ‘143’ ಎನ್ನುವ ಕಮರ್ಷಿಯಲ್ ಸಿನಿಮಾ ಮಾಡಿದ್ದರು ನಿರ್ದೇಶಕ ಚಂದ್ರಕಾಂತ್. ಇದಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಈಗ ಅದೇ ಚಂದ್ರಕಾಂತ್ ಇನ್ನೊಂದು ಸಿನಿಮಾ ಸಿದ್ಧಪಡಿಸಿಕೊಂಡು, ವೀಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.</p>.<p>ಈ ಚಿತ್ರದ ಹೆಸರು ‘ತ್ರಿಕೋನ’. ಚಿತ್ರವನ್ನು ಮೂರು ಭಾಷೆಗಳಲ್ಲಿ (ಕನ್ನಡ, ತೆಲುಗು ಮತ್ತು ತಮಿಳು) ಸಿದ್ಧಪಡಿಸಲಾಗಿದೆ. ಸುರೇಶ್ ಹೆಬ್ಳೀಕರ್, ಅಚ್ಯುತ್ ಕುಮಾರ್, ಸುಧಾರಾಣಿ ಅವರೂ ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.</p>.<p>‘ತ್ರಿಕೋನ’ ಚಿತ್ರಕ್ಕೆ ಬಂಡವಾಳ ಹೂಡಿದವರು ರಾಜಶೇಖರ್. ಚಿತ್ರದ ಕಥೆ ಕೂಡ ಅವರದ್ದೇ. ‘ಚಂದ್ರಕಾಂತ್ ಅವರು ನಿರ್ದೇಶಿಸಿದ್ದ 143 ಚಿತ್ರ ವೀಕ್ಷಿಸಿದ್ದೆ. ಅದನ್ನು ನೋಡಿದ ನಂತರ ಅವರ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಅನಿಸಿತು. ಈ ಚಿತ್ರದ ತಂತ್ರಜ್ಞರೇ ನಾಯಕ ಹಾಗೂ ನಾಯಕಿ’ ಎಂದರು ರಾಜಶೇಖರ್. ‘ತ್ರಿಕೋನ’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆಯಂತೆ.</p>.<p>‘ತಾಳ್ಮೆ, ಶಕ್ತಿ ಮತ್ತು ಅಹಂ ಪ್ರತಿ ಮನುಷ್ಯನಲ್ಲೂ ಇರಬಹುದಾದ ಗುಣಗಳು. ಮನುಷ್ಯನ ವಯಸ್ಸಿಗೆ ತಕ್ಕಂತೆ ಶಕ್ತಿ ಮತ್ತು ಅಹಂ ಬರುತ್ತವೆ, ಹೋಗುತ್ತವೆ. ಆದರೆ ತಾಳ್ಮೆ ಹಾಗಲ್ಲ. ಅದು ಎಲ್ಲರಿಗೂ ಬರುವುದಿಲ್ಲ. ಒಮ್ಮೆ ಬಂದರೆ, ಬಿಟ್ಟುಹೋಗುವುದಿಲ್ಲ. ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸುವ ಕೆಲಸ ಮಾಡಿದ್ದೇವೆ’ ಎಂದರು ಚಂದ್ರಕಾಂತ್.</p>.<p>ಈ ಚಿತ್ರದ ಚಿತ್ರೀಕರಣವು ಬೆಂಗಳೂರು, ಸುಬ್ರಹ್ಮಣ್ಯ, ಕಡಬ, ಪಂಜ, ಪುತ್ತೂರು, ಮಂಗಳೂರು, ಹಾಸನ ಮತ್ತು ಸಕಲೇಶಪುರದಲ್ಲಿ ನಡೆದಿದೆ.</p>.<p>‘ತ್ರಿಕೋನ’ದ ಕಥೆಯನ್ನು ಸಿದ್ಧಪಡಿಸಿದ್ದ ನಿರ್ಮಾಪಕರಿಗೆ, ಚಂದ್ರಕಾಂತ್ ಅವರು ಕಥೆಯ ಬಗ್ಗೆ ಕೊಟ್ಟ ವಿವರಣೆ ಬಹಳ ಇಷ್ಟವಾಯಿತು. ಹಾಗಾಗಿ ತಮ್ಮ ಕಥೆಯನ್ನು ಚಿತ್ರವನ್ನಾಗಿಸಲು ಚಂದ್ರಕಾಂತ್ ಅವರೇ ನಿರ್ದೇಶಕರಾಗಿ ಕೆಲಸ ಮಾಡಬೇಕು ಎಂದು ರಾಜಶೇಖರ್ ತೀರ್ಮಾನಿಸಿದರು. ಇದು ಈ ಚಿತ್ರದ ತೆರೆಯ ಹಿಂದಿನ ಚಿಕ್ಕ ಕಥೆ.</p>.<p>ಶಕ್ತಿ, ಅಹಂ ಮತ್ತು ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸುವ ಪಾತ್ರವನ್ನು ಬಳ್ಳಾರಿಯ ಮಾರುತೇಶ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿಂದೆ ಎರಡೇ ಪಾತ್ರಗಳನ್ನು ಇಟ್ಟುಕೊಂಡು, ‘143’ ಎನ್ನುವ ಕಮರ್ಷಿಯಲ್ ಸಿನಿಮಾ ಮಾಡಿದ್ದರು ನಿರ್ದೇಶಕ ಚಂದ್ರಕಾಂತ್. ಇದಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಈಗ ಅದೇ ಚಂದ್ರಕಾಂತ್ ಇನ್ನೊಂದು ಸಿನಿಮಾ ಸಿದ್ಧಪಡಿಸಿಕೊಂಡು, ವೀಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.</p>.<p>ಈ ಚಿತ್ರದ ಹೆಸರು ‘ತ್ರಿಕೋನ’. ಚಿತ್ರವನ್ನು ಮೂರು ಭಾಷೆಗಳಲ್ಲಿ (ಕನ್ನಡ, ತೆಲುಗು ಮತ್ತು ತಮಿಳು) ಸಿದ್ಧಪಡಿಸಲಾಗಿದೆ. ಸುರೇಶ್ ಹೆಬ್ಳೀಕರ್, ಅಚ್ಯುತ್ ಕುಮಾರ್, ಸುಧಾರಾಣಿ ಅವರೂ ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.</p>.<p>‘ತ್ರಿಕೋನ’ ಚಿತ್ರಕ್ಕೆ ಬಂಡವಾಳ ಹೂಡಿದವರು ರಾಜಶೇಖರ್. ಚಿತ್ರದ ಕಥೆ ಕೂಡ ಅವರದ್ದೇ. ‘ಚಂದ್ರಕಾಂತ್ ಅವರು ನಿರ್ದೇಶಿಸಿದ್ದ 143 ಚಿತ್ರ ವೀಕ್ಷಿಸಿದ್ದೆ. ಅದನ್ನು ನೋಡಿದ ನಂತರ ಅವರ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಅನಿಸಿತು. ಈ ಚಿತ್ರದ ತಂತ್ರಜ್ಞರೇ ನಾಯಕ ಹಾಗೂ ನಾಯಕಿ’ ಎಂದರು ರಾಜಶೇಖರ್. ‘ತ್ರಿಕೋನ’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆಯಂತೆ.</p>.<p>‘ತಾಳ್ಮೆ, ಶಕ್ತಿ ಮತ್ತು ಅಹಂ ಪ್ರತಿ ಮನುಷ್ಯನಲ್ಲೂ ಇರಬಹುದಾದ ಗುಣಗಳು. ಮನುಷ್ಯನ ವಯಸ್ಸಿಗೆ ತಕ್ಕಂತೆ ಶಕ್ತಿ ಮತ್ತು ಅಹಂ ಬರುತ್ತವೆ, ಹೋಗುತ್ತವೆ. ಆದರೆ ತಾಳ್ಮೆ ಹಾಗಲ್ಲ. ಅದು ಎಲ್ಲರಿಗೂ ಬರುವುದಿಲ್ಲ. ಒಮ್ಮೆ ಬಂದರೆ, ಬಿಟ್ಟುಹೋಗುವುದಿಲ್ಲ. ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸುವ ಕೆಲಸ ಮಾಡಿದ್ದೇವೆ’ ಎಂದರು ಚಂದ್ರಕಾಂತ್.</p>.<p>ಈ ಚಿತ್ರದ ಚಿತ್ರೀಕರಣವು ಬೆಂಗಳೂರು, ಸುಬ್ರಹ್ಮಣ್ಯ, ಕಡಬ, ಪಂಜ, ಪುತ್ತೂರು, ಮಂಗಳೂರು, ಹಾಸನ ಮತ್ತು ಸಕಲೇಶಪುರದಲ್ಲಿ ನಡೆದಿದೆ.</p>.<p>‘ತ್ರಿಕೋನ’ದ ಕಥೆಯನ್ನು ಸಿದ್ಧಪಡಿಸಿದ್ದ ನಿರ್ಮಾಪಕರಿಗೆ, ಚಂದ್ರಕಾಂತ್ ಅವರು ಕಥೆಯ ಬಗ್ಗೆ ಕೊಟ್ಟ ವಿವರಣೆ ಬಹಳ ಇಷ್ಟವಾಯಿತು. ಹಾಗಾಗಿ ತಮ್ಮ ಕಥೆಯನ್ನು ಚಿತ್ರವನ್ನಾಗಿಸಲು ಚಂದ್ರಕಾಂತ್ ಅವರೇ ನಿರ್ದೇಶಕರಾಗಿ ಕೆಲಸ ಮಾಡಬೇಕು ಎಂದು ರಾಜಶೇಖರ್ ತೀರ್ಮಾನಿಸಿದರು. ಇದು ಈ ಚಿತ್ರದ ತೆರೆಯ ಹಿಂದಿನ ಚಿಕ್ಕ ಕಥೆ.</p>.<p>ಶಕ್ತಿ, ಅಹಂ ಮತ್ತು ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸುವ ಪಾತ್ರವನ್ನು ಬಳ್ಳಾರಿಯ ಮಾರುತೇಶ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>