ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸೆಮಣೆಯ ಹಾದಿಯಲ್ಲಿ ‘ವಿಜಯಾನಂದ’, ನಿರ್ದೇಶಕಿ

Last Updated 3 ಫೆಬ್ರುವರಿ 2023, 9:05 IST
ಅಕ್ಷರ ಗಾತ್ರ

ನಿರ್ದೇಶಕಿ ರಿಶಿಕಾ ಶರ್ಮಾ ಮತ್ತು ನಟ ನಿಹಾಲ್‌ ರಜಪೂತ್‌ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಈ ತಿಂಗಳಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ. ಈ ಜೋಡಿ ನೆನಪಿರಬೇಕಲ್ಲಾ? ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಗಾಥೆ ಆಧರಿತ ‘ವಿಜಯಾನಂದ’ ಚಿತ್ರವನ್ನು ನಿರ್ದೇಶಿಸಿದವರು ರಿಶಿಕಾ. ನಿಹಾಲ್‌ ಆ ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರ ನಿರ್ವಹಿಸಿದ್ದರು.

ಮದುವೆಯಾಗುತ್ತಿರುವ ಬಗ್ಗೆ ರಿಶಿಕಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಸಂತೋಷದ ಸುದ್ದಿಯೊಂದನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ನಾನು ಮತ್ತು ನಿಹಾಲ್‌ ಫೆಬ್ರುವರಿಯಲ್ಲಿ ಮದುವೆಯಾಗಲಿದ್ದೇವೆ. ಮಿಲಿಯನ್‌ಗಟ್ಟಲೆ ಸುಂದರ ಕ್ಷಣಗಳು ನಮ್ಮ ಪ್ರೀತಿಯ ಕಥನವನ್ನು ಸೃಷ್ಟಿಸಿವೆ. ಸಂತಸದಾಯಕ, ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಯ ನೆಲೆಗಟ್ಟಿನ ದಾರಿಯಲ್ಲಿ ಹೆಜ್ಜೆಯಿಡುತ್ತಿದ್ದೇವೆ. ಹರಸಿ ಹಾರೈಸಿ, ನಿಮ್ಮ ಪ್ರೀತಿ, ವಿಶ್ವಾಸ ಸದಾ ಮುನ್ನೊಡುವ - ರಿಷಿಕಾ ಮತ್ತು ನಿಹಾಲ್’ ಎಂದು ಬರೆದುಕೊಂಡಿದ್ದಾರೆ.

ಸಿನಿರಂಗದ ಮೂಲಗಳ ಪ್ರಕಾರ ಈ ಜೋಡಿ ಫೆ. 15ರಂದು ಬೆಂಗಳೂರಿನ ಮಲ್ಲೇಶ್ವರದ ಟಿಟಿಡಿ ಕಲ್ಯಾಣಮಂಟಪದಲ್ಲಿ ಮದುವೆಯಾಗಲಿದೆ. ಫೆ. 17ರಂದು ಧಾರವಾಡದಲ್ಲಿ ಆರತಕ್ಷತೆ ಹಮ್ಮಿಕೊಂಡಿದೆ ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT