ವಿದ್ಯಾಭರಣ ಕೂಡ ಕೊಂಚ ಅವಸರದಲ್ಲಿಯೇ ಇದ್ದರು. ’ಮನೆಯವರೆಲ್ಲರೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಚಿತ್ರದ ಪ್ರಚಾರಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಗೆ ಬರಲು ಸಾಧ್ಯವಾಗಿಲ್ಲ. ನಿರ್ದೇಶಕರು ಹೈದರಾಬಾದ್ನಲ್ಲಿ ಸಿನಿಮಾ ಕೆಲಸದಲ್ಲಿಯೇ ಇದ್ದಾರೆ‘ ಎಂಬ ಸ್ಪಷ್ಟನೆಯ ಜತೆಗೇ ಮಾತು ಆರಂಭಿಸಿದರು ವಿದ್ಯಾಭರಣ. ನಾಯಕಿ ಶಿರೀನ್ ತಮಿಳು ಸಿನಿಮಾದಲ್ಲಿ ಬ್ಯುಸಿ ಇರುವುದರಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲವಂತೆ.ನಾಗೇಶ್ ನಾರದಾಸಿ ಈ ಚಿತ್ರದ ನಿರ್ದೇಶಕರು.