‘ಒಳ್ಳೆಯ ಚಿತ್ರಗಳನ್ನು ಮಾಡಿದರಷ್ಟೇ ಸಾಲದು. ಅವುಗಳನ್ನು ಜನರಿಗೆ ತಲುಪಿಸುವ ಪ್ರಯತ್ನವೂ ಅತ್ಯಂತ ಮುಖ್ಯವಾದುದು’ ಎನ್ನುವ ಮಹೇಂದರ್ ಮಾತುಗಳಲ್ಲಿ ಸದಭಿರುಚಿಯ ಚಿತ್ರಗಳ ಬಗ್ಗೆ ಕಾಳಜಿಯಿತ್ತು.
ಹಂಸಲೇಖಾ ಅವರಿಗೆ ಗಂಧರ್ವ ಅವರ ಸಂಗೀತ ಇಷ್ಟವಾದಂತಿತ್ತು. ‘ಗಂಧರ್ವ ಇನ್ನಷ್ಟು ಒಳ್ಳೆಯ ಅವಕಾಶಗಳಿಗೆ ಅರ್ಹರು’ ಎಂದವರು ಪ್ರಶಂಸೆಯ ಮಾತುಗಳನ್ನಾಡಿದರು.
ಅನುಭವಿ ನಿರ್ಮಾಪಕ ಎಸ್.ವಿ.ಬಾಬು ‘ಕಾಲ್ಗೆಜ್ಜೆ’ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಬಿಡುಗಡೆ ತುಸು ಸಲೀಸಾಗಿದೆ. ಸಿನಿಮಾ ಬಿಡುಗಡೆಯ ಸಂಕಷ್ಟಗಳ ಬಗ್ಗೆ ಮಾತನಾಡಿದ ಬಾಬು- ‘ಒಂದು ಸಿನಿಮಾದಲ್ಲಿ, ನಿರ್ಮಾಣ ಎನ್ನುವುದು ಶೇ.25ರಷ್ಟು ಭಾಗ. ಉಳಿದ ಮುಕ್ಕಾಲು ಪಾಲು ಮಾರ್ಕೆಟಿಂಗ್ ಹಾಗೂ ತೆರೆಕಾಣಿಸುವ ಪ್ರಕ್ರಿಯೆಗಳಾಗಿರುತ್ತವೆ’ ಎಂದರು.
ಅಂದಹಾಗೆ, ವಿಶ್ವಾಸ್, ರೂಪಿಕಾ, ಅನಂತನಾಗ್, ಸುಮಿತ್ರಾ, ತಬಲಾ ನಾಣಿ, ನೀನಾಸಂ ಅಶ್ವಥ್ ಮುಂತಾದವರು ತಾರಾಗಣದಲ್ಲಿರುವ ‘ಕಾಲ್ಗೆಜ್ಜೆ’ ಚಿತ್ರ ಇಂದು (ಜ.4) ತೆರೆಕಾಣುತ್ತಿದೆ.