`ಪಾರು ವೈಫ್ಆಫ್ ದೇವದಾಸ್' ಚಿತ್ರಕ್ಕೆ ಚಿಕ್ಕಮಗಳೂರಿನಲ್ಲಿ `ಗುರುಕುಲ' ಸೆಟ್ ಹಾಕಲಾಗಿದೆ. ಹನ್ನೆರಡು ದಿನಗಳಿಂದ ಎರಡು ಹಾಡು, ಕೆಲವು ಸನ್ನಿವೇಶಗಳು ಹಾಗೂ ಒಂದು ಸಾಹಸ ಸನ್ನಿವೇಶ ಸಹ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಕಿರಣ್ ಗೋವಿ ಅವರು ಮತ್ತಷ್ಟು ಚಿತ್ರೀಕರಣವನ್ನು ಗದಗದಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಕೃಷ್ಣ ದೇವೇಗೌಡ, ಮುಕ್ತಾರ್ ನಿರ್ಮಿಸಿರುವ ಈ ಚಿತ್ರಕ್ಕೆ ರಮೇಶ್ ರಾಜ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಪಳನಿ ರಾಜ್ ಸಾಹಸ ಇದೆ. ಶ್ರಿನಗರ ಕಿಟ್ಟಿ ಹಾಗೂ ಸೌಂದರ್ಯ ಜಯಮಾಲಾ ನಾಯಕ- ನಾಯಕಿ ನಟಿಸಿದ್ದಾರೆ.