<p>ಕ್ಯಾಮೆರಾಮನ್ ರಾಜೇಂದ್ರ ಸಿಂಗ್ ಅನ್ನಿ, ನಿರ್ದೇಶಕ ರಾಜೇಂದ್ರ ಸಿಂಗ್ ಅನ್ನಿ- ಎರಡೂ ಒಬ್ಬರೇ. ಸಂಚಿಕೆ ನಿರ್ದೇಶಕ ಎನ್ನಿ, ಪ್ರಧಾನ ನಿರ್ದೇಶಕ ಎನ್ನಿ- ಅವೆರಡರಲ್ಲೂ ಒಬ್ಬರೇ ಸಿಂಗ್. <br /> <br /> ಮೆಗಾ ಧಾರಾವಾಹಿಗಳಲ್ಲಿ ಸಾಮಾನ್ಯವಾಗಿ ಪ್ರಧಾನ ನಿರ್ದೇಶಕ ಹಾಗೂ ಸಂಚಿಕೆ ನಿರ್ದೇಶಕ ಎಂದು ಇಬ್ಬಿಬ್ಬರಿರುತ್ತಾರೆ. ಸಂಚಿಕೆ ನಿರ್ದೇಶಕರ ಹೆಸರು ಶೀರ್ಷಿಕೆಯಲ್ಲಿ ಕಾಣಿಸದಿರಬಹುದು. ಆದರೆ, ಬಹುಪಾಲು `ಮೆಗಾ~ಗಳಲ್ಲಿ ಸಂಚಿಕೆ ನಿರ್ದೇಶಕ ಇದ್ದೇ ಇರುತ್ತಾನೆ. <br /> <br /> ರಾಜೇಂದ್ರಸಿಂಗ್ ಧಾರಾವಾಹಿಗಳಲ್ಲಿ ಮಾತ್ರ ಈ ಎರಡೂ ಒಬ್ಬರೇ. ಅಲ್ಲಿಗೆ ಒಂದರ್ಥದಲ್ಲಿ ನಾಲ್ಕು ಪಾತ್ರಗಳು. ಅತಿ ಹೆಚ್ಚು ಮೆಗಾ ಧಾರಾವಾಹಿ ನಿರ್ದೇಶಿಸಿದ ಹೆಸರೂ ಅವರಿಗೆ ಇದೆ. <br /> <br /> `ಸ್ತ್ರೀ~, `ಬದುಕು~, `ಬೃಂದಾವನ~, `ಬಾಂಧವ್ಯ~- ಹೀಗೆ ಸಾಲು ಸಾಲು `ಮೆಗಾ~ಗಳನ್ನು ಅವರು ನಿರ್ದೇಶಿಸಿದ್ದಾರೆ. ಎಲ್ಲವಕ್ಕೂ ಅವರದೇ ಕ್ಯಾಮೆರಾದ ಕಣ್ಣು. ಇದೀಗ `ಮೂಕಾಂಬಿಕೆ~ಗೆ ಹೈದರಾಬಾದ್ನಲ್ಲಿ ಶೂಟಿಂಗ್ ನಡೆದಿದೆ. ಶೀಘ್ರದಲ್ಲೇ ಈಟಿವಿಯಲ್ಲಿ ಅದರ ಪ್ರಸಾರ ಆರಂಭವಾಗಲಿದೆ. ಅಂದಹಾಗೆ ಅದರ ಕ್ಯಾಮೆರಾಮನ್ ಸಹ ಅವರೇ.</p>.<p>ಕ್ಯಾಮೆರಾ ಹಾಗೂ ನಿರ್ದೇಶನ ಎರಡನ್ನೂ ಒಟ್ಟಿಗೆ ಹೇಗೆ ನಿಭಾಯಿಸ್ತೀರಿ?<br /> ಬಹಳ ಖುಷಿಯಿಂದ ನಿರ್ವಹಿಸ್ತೇನೆ.</p>.<p><strong>ಹೊರೆ ಆಗಲ್ವೆ?</strong><br /> ಇಲ್ಲ. ಇನ್ನೂ ಸುಲಭ ಆಗುತ್ತೆ.</p>.<p><strong>ಹೇಗೆ?</strong><br /> ನಿರ್ದೇಶಕನ ಮನಸ್ಸಲ್ಲಿ ಇರೋದನ್ನ ಕ್ಯಾಮೆರಾಮನ್ ಜಾರಿಗೊಳಿಸಬೇಕು. ಎರಡೂ ನಾನೇ ಆಗಿರೋದರಿಂದ ಸುಲಭ ಆಗುತ್ತೆ.</p>.<p><strong>ಎರಡು ಭಿನ್ನ ಸೃಜನಶೀಲ ಕ್ರಿಯೆಗಳು ಎರಕಗೊಳ್ಳವುದು ಹೇಗೆ?</strong><br /> ಎರಡಕ್ಕೂ ಬೇಕಾಗಿರುವುದು ಒಂದೇ ರೀತಿಯ ಕ್ರಿಯೇಟಿವಿಟಿ. ಅಧ್ಯಯನ, ಅನುಭವ, ಜಗತ್ತಿನ ನಾನಾ ಭಾಷೆಯ ಸಿನಿಮಾ, ಕಿರುತೆರೆ ಶೋಗಳ ವೀಕ್ಷಣೆಯಿಂದ ನನ್ನೊಳಗೊಬ್ಬ ನಿರ್ದೇಶಕ ರೂಪುಗೊಳ್ತಾನೆ.<br /> <br /> ತೆರೆಯ ಹಿಂದೆ ಕ್ರಿಯಾಶೀಲನಾಗಲು ಬಾಲ್ಯದಿಂದಲೇ ಕನಸು ಕಾಣುತ್ತಿದ್ದೆ. ಸಿನಿಮಾಟೊಗ್ರಫಿ ಮಾಡಿಕೊಂಡು ಕ್ಯಾಮೆರಾಮನ್ಗೆ ಬೇಕಾದ ಸಿದ್ಧತೆ ಮಾಡಿಕೊಂಡೆ.</p>.<p>ಕ್ಯಾಮೆರಾಮನ್, ನಿರ್ದೇಶಕ ದ್ವಿಪಾತ್ರ ನಿರ್ವಹಿಸುವವರು ಅಪವಾದವೆಂಬಂತೆ ಕೆಲ ಉದಾಹರಣೆ ಇರಬಹುದು. ಆದರೆ ನಿರಂತರವಾಗಿ ಆ ಕೆಲಸ ಮಾಡುತ್ತಿರುವವರು ಕನ್ನಡ ಕಿರುತೆರೆಯ ಮಟ್ಟಿಗೆ ನೀವೇ.<br /> <br /> ಹೌದು. ರೈಟ್ ಪ್ರಮ್ ದಿ ಡೇ ಒನ್ ನಾನು ಕಿರುತೆರೆಯಲ್ಲಿ ಕ್ರಿಯಾಶೀಲನಾಗಿದ್ದೇನೆ. 1987-88ರಲ್ಲಿ `ಬಾಲ ಏಸು~ ಟೆಲಿಫಿಲಂ ಮಾಡಿದೆ. ಅಲ್ಲಿಂದ ಸತತವಾಗಿ ಕ್ಯಾಮೆರಾ, ನಿರ್ದೇಶನ ಎರಡನ್ನೂ ಮಾಡ್ತಾ ಇದ್ದೇನೆ. <br /> <br /> ಅಶೋಕ ಕಶ್ಯಪ್, ಅಶೋಕ ನಾಯ್ಡು, ನಾಗರಾಜ ಆದವಾನಿ ಮುಂತಾದವರು ಕ್ಯಾಮೆರಾ, ನಿರ್ದೇಶನ ಎರಡನ್ನೂ ಮಾಡಿದ್ದಾರೆ. ಆದರೆ ಎರಡೂ ಒಟ್ಟೊಟ್ಟಿಗಿನ ನಿರಂತರತೆಯಲ್ಲಿ ನನ್ನದು ದಕ್ಷಿಣ ಭಾರತದಲ್ಲೇ ದಾಖಲೆ ಅಂತ ಹೇಳ್ತಾರೆ.</p>.<p><strong>ಈ ವಿಷಯದಲ್ಲಿ ನಿಮಗೆ ನೀವೇ ಸಾಟಿ. ನಿಮ್ಮಳಗಿನ ನಿರ್ದೇಶಕ ಮತ್ತು ಕ್ಯಾಮೆರಾಮನ್ ಜತೆ ತಾಕಲಾಟ ಬರುವುದಿಲ್ಲವೆ? </strong><br /> ನಾನು ಮೊದಲೇ ಹೇಳಿದ ಹಾಗೆ ಹೆಚ್ಚಾಗಿ ಅನುಕೂಲವೇ ಆಗಿದೆ. ಇಬ್ಬರಿಗೂ ಒಳ್ಳೆಯ ತಿಳಿವಳಿಕೆ ಇದೆ. ಅಷ್ಟಕ್ಕೂ ನಿರ್ದೇಶಕ ಏನನ್ನೇ ಆಗಲಿ, ಕ್ಯಾಮೆರಾ ಕಣ್ಣಿನಿಂದ ತೋರಿಸಬೇಕು. ಎರಡೂ ನಾನೇ ಆಗಿರುವುದರಿಂದ ಒಳ್ಳೆಯದೇ ಆಗಿದೆ. <br /> <br /> ಕ್ಯಾಮೆರಾಮನ್ ಚೆನ್ನಾಗಿ ದೃಶ್ಯೀಕರಿಸಬಹುದು ಅನಿಸಿದ್ದನ್ನು ಕೆಲವು ಸಲ ಮಾಡಲಿಕ್ಕಾಗದೇ ಇರಬಹುದು. ಯಾಕೆಂದರೆ ಅವನ ಸೂತ್ರಧಾರ ನಿರ್ದೇಶಕ. ಸಹಜವಾಗಿ ನಿರ್ದೇಶಕನಿಗೆ ಕೆಲವು ಮಿತಿಗಳು ಇರುತ್ತವೆ. ಆಗ ಕ್ಯಾಮೆರಾಮನ್ ನೊಂದುಕೊಳ್ತಾನೆ. ಕೆಲವೊಮ್ಮೆ ನನಗೆ ಹಾಗಾಗಿದೆ.</p>.<p><strong>ಟಿವಿ ಧಾರಾವಾಹಿಗಳ ಚಿತ್ರೀಕರಣ ಹೆಚ್ಚಾಗಿ ಮನೆಗಳಲ್ಲೇ ನಡೆಯುತ್ತದೆ. ಹಾಗಾಗಿ ನಿಮ್ಮ ದ್ವಿಪಾತ್ರ ಹಗುರ ಅನಿಸ್ತದೆಯಾ?<br /> </strong>ಹಾಗೇನಿಲ್ಲ. ಮುಕ್ಕಾಲು ಬಾಗ ಚಿತ್ರೀಕರಣ ಬೆಂಗಳೂರಿನ ಶೂಟಿಂಗ್ ಮನೆಗಳಲ್ಲಿ ನಡೆಯುತ್ತೆ, ನಿಜ. <br /> <br /> ಆ ಕಾರಣಕ್ಕೆ ಹಗುರಂತ ಏನೂ ಇಲ್ಲ. ಎರಡೂ ಪಾತ್ರ ನಿರ್ವಹಿಸಲೇಬೇಕು. ಹೊರಾಂಗಣಕ್ಕೆ ಬೆಂಗಳೂರು ಸಮೀಪದ ಹಳ್ಳಿ, ಹಸಿರು, ಬಂಡೆಗಳ ಪರಿಸರಕ್ಕೆ ಹೋಗ್ತೇವೆ.</p>.<p>ಯಾಕೆ ದೂರ ಹೋಗೋಕಾಗಲ್ವೆ? ಸಮುದ್ರ ತೀರ ಅಥವಾ ಉತ್ತರ ಕರ್ನಾಟಕ...<br /> ಕೆಲವು ದೃಶ್ಯಗಳಿಗೆ ವಿಶಾಲವಾದ ಬಯಲು ಬೇಕು ಅನಿಸುತ್ತೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ಅಂತಹ ವಿಸ್ತಾರ ಪ್ರದೇಶಗಳಿವೆ. <br /> <br /> ಏಕಾಕಿತನ ತೋರಿಸಬೇಕಾದರೆ ಇಂತಹ ಕಡೆ ವ್ಯಕ್ತಿ ನಡೆದು ಬರುವ ದೃಶ್ಯ ಚಿತ್ರೀಕರಿಸುವುದು ಸೂಕ್ತ ಅಂತ ನನ್ನೊಳಗಿನ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಇಬ್ಬರಿಗೂ ಒಟ್ಟಿಗೇ ಅನಿಸುತ್ತೆ. ಆದರೆ ಎಲ್ಲವನ್ನೂ ಬಜೆಟ್ ನಿರ್ಧಾರ ಮಾಡುತ್ತೆ!</p>.<p><strong>ಒಳ್ಳೆಯ ಕ್ಯಾಮೆರಾಮನ್ ಆಗಿದ್ದುಕೊಂಡು ಇತರರ ನಿರ್ದೇಶನದ ಧಾರಾವಾಹಿಗಳಿಗೆ ಕೆಲಸ ಮಾಡಿದ್ದೀರಲ್ಲವೆ</strong>?<br /> ಅವೂ ಮಾಡಿದ್ದೇನೆ. ಸೇತುರಾಮ್ರ `ಮಂಥನ~ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬರೀ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದೇನೆ. ಆದರೆ ದ್ವಿಪಾತ್ರವೇ ಹೆಚ್ಚು.</p>.<p><strong>ಹಾಗಾದರೆ ನಿಮ್ಮದು ದಾಖಲೇನೆ ಸರಿ. ಹೀಗೆ ಹೆಚ್ಚಿನ ಹೊರೆಯಾದರೆ ಕಲಾವಿದರ ಮೇಲೆ ನಿಮಗೆ ನಿಯಂತ್ರಣ ಉಳಿಯುತ್ತದೆಯೇ?<br /> </strong>ಅದೇನು ತೊಂದ್ರೆ ಇಲ್ಲ. ವೃತ್ತಿ ಕಲಾವಿದರಾದರೆ ತೊಂದರೆ ಇಲ್ಲವೇ ಇಲ್ಲ. ಸ್ವಲ್ಪ ಹೇಳಿದ ತಕ್ಷಣ ಎಲ್ಲ ಅರಿತುಕೊಳ್ತಾರೆ. ಭಾವನೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬೇಸಿಕ್ ವಿಷಯ ಅವರಿಗೆ ಗೊತ್ತಿರ್ತದೆ. ಹೊಸಬರಾದರೆ ಸ್ವಲ್ಪ ಕಷ್ಟ.</p>.<p><strong>ಕ್ಯಾಮೆರಾ, ನಿರ್ದೇಶನ ಒಟ್ಟಿಗೇ ಮಾಡಿ. ಆದರೆ ಕೆಲಸ ಹಗುರ ಮಾಡಿಕೊಳ್ಳಲು ಸಂಚಿಕೆ ನಿರ್ದೇಶಕರ ಸಹಾಯ ಪಡೆಯಬಹುದಲ್ವೆ?</strong><br /> ಇಲ್ಲ. ಎಲ್ಲ ನಾನು ಮಾಡಿದಾಗಲೇ ಸಂತೋಷ.<br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕ್ಯಾಮೆರಾಮನ್ ರಾಜೇಂದ್ರ ಸಿಂಗ್ ಅನ್ನಿ, ನಿರ್ದೇಶಕ ರಾಜೇಂದ್ರ ಸಿಂಗ್ ಅನ್ನಿ- ಎರಡೂ ಒಬ್ಬರೇ. ಸಂಚಿಕೆ ನಿರ್ದೇಶಕ ಎನ್ನಿ, ಪ್ರಧಾನ ನಿರ್ದೇಶಕ ಎನ್ನಿ- ಅವೆರಡರಲ್ಲೂ ಒಬ್ಬರೇ ಸಿಂಗ್. <br /> <br /> ಮೆಗಾ ಧಾರಾವಾಹಿಗಳಲ್ಲಿ ಸಾಮಾನ್ಯವಾಗಿ ಪ್ರಧಾನ ನಿರ್ದೇಶಕ ಹಾಗೂ ಸಂಚಿಕೆ ನಿರ್ದೇಶಕ ಎಂದು ಇಬ್ಬಿಬ್ಬರಿರುತ್ತಾರೆ. ಸಂಚಿಕೆ ನಿರ್ದೇಶಕರ ಹೆಸರು ಶೀರ್ಷಿಕೆಯಲ್ಲಿ ಕಾಣಿಸದಿರಬಹುದು. ಆದರೆ, ಬಹುಪಾಲು `ಮೆಗಾ~ಗಳಲ್ಲಿ ಸಂಚಿಕೆ ನಿರ್ದೇಶಕ ಇದ್ದೇ ಇರುತ್ತಾನೆ. <br /> <br /> ರಾಜೇಂದ್ರಸಿಂಗ್ ಧಾರಾವಾಹಿಗಳಲ್ಲಿ ಮಾತ್ರ ಈ ಎರಡೂ ಒಬ್ಬರೇ. ಅಲ್ಲಿಗೆ ಒಂದರ್ಥದಲ್ಲಿ ನಾಲ್ಕು ಪಾತ್ರಗಳು. ಅತಿ ಹೆಚ್ಚು ಮೆಗಾ ಧಾರಾವಾಹಿ ನಿರ್ದೇಶಿಸಿದ ಹೆಸರೂ ಅವರಿಗೆ ಇದೆ. <br /> <br /> `ಸ್ತ್ರೀ~, `ಬದುಕು~, `ಬೃಂದಾವನ~, `ಬಾಂಧವ್ಯ~- ಹೀಗೆ ಸಾಲು ಸಾಲು `ಮೆಗಾ~ಗಳನ್ನು ಅವರು ನಿರ್ದೇಶಿಸಿದ್ದಾರೆ. ಎಲ್ಲವಕ್ಕೂ ಅವರದೇ ಕ್ಯಾಮೆರಾದ ಕಣ್ಣು. ಇದೀಗ `ಮೂಕಾಂಬಿಕೆ~ಗೆ ಹೈದರಾಬಾದ್ನಲ್ಲಿ ಶೂಟಿಂಗ್ ನಡೆದಿದೆ. ಶೀಘ್ರದಲ್ಲೇ ಈಟಿವಿಯಲ್ಲಿ ಅದರ ಪ್ರಸಾರ ಆರಂಭವಾಗಲಿದೆ. ಅಂದಹಾಗೆ ಅದರ ಕ್ಯಾಮೆರಾಮನ್ ಸಹ ಅವರೇ.</p>.<p>ಕ್ಯಾಮೆರಾ ಹಾಗೂ ನಿರ್ದೇಶನ ಎರಡನ್ನೂ ಒಟ್ಟಿಗೆ ಹೇಗೆ ನಿಭಾಯಿಸ್ತೀರಿ?<br /> ಬಹಳ ಖುಷಿಯಿಂದ ನಿರ್ವಹಿಸ್ತೇನೆ.</p>.<p><strong>ಹೊರೆ ಆಗಲ್ವೆ?</strong><br /> ಇಲ್ಲ. ಇನ್ನೂ ಸುಲಭ ಆಗುತ್ತೆ.</p>.<p><strong>ಹೇಗೆ?</strong><br /> ನಿರ್ದೇಶಕನ ಮನಸ್ಸಲ್ಲಿ ಇರೋದನ್ನ ಕ್ಯಾಮೆರಾಮನ್ ಜಾರಿಗೊಳಿಸಬೇಕು. ಎರಡೂ ನಾನೇ ಆಗಿರೋದರಿಂದ ಸುಲಭ ಆಗುತ್ತೆ.</p>.<p><strong>ಎರಡು ಭಿನ್ನ ಸೃಜನಶೀಲ ಕ್ರಿಯೆಗಳು ಎರಕಗೊಳ್ಳವುದು ಹೇಗೆ?</strong><br /> ಎರಡಕ್ಕೂ ಬೇಕಾಗಿರುವುದು ಒಂದೇ ರೀತಿಯ ಕ್ರಿಯೇಟಿವಿಟಿ. ಅಧ್ಯಯನ, ಅನುಭವ, ಜಗತ್ತಿನ ನಾನಾ ಭಾಷೆಯ ಸಿನಿಮಾ, ಕಿರುತೆರೆ ಶೋಗಳ ವೀಕ್ಷಣೆಯಿಂದ ನನ್ನೊಳಗೊಬ್ಬ ನಿರ್ದೇಶಕ ರೂಪುಗೊಳ್ತಾನೆ.<br /> <br /> ತೆರೆಯ ಹಿಂದೆ ಕ್ರಿಯಾಶೀಲನಾಗಲು ಬಾಲ್ಯದಿಂದಲೇ ಕನಸು ಕಾಣುತ್ತಿದ್ದೆ. ಸಿನಿಮಾಟೊಗ್ರಫಿ ಮಾಡಿಕೊಂಡು ಕ್ಯಾಮೆರಾಮನ್ಗೆ ಬೇಕಾದ ಸಿದ್ಧತೆ ಮಾಡಿಕೊಂಡೆ.</p>.<p>ಕ್ಯಾಮೆರಾಮನ್, ನಿರ್ದೇಶಕ ದ್ವಿಪಾತ್ರ ನಿರ್ವಹಿಸುವವರು ಅಪವಾದವೆಂಬಂತೆ ಕೆಲ ಉದಾಹರಣೆ ಇರಬಹುದು. ಆದರೆ ನಿರಂತರವಾಗಿ ಆ ಕೆಲಸ ಮಾಡುತ್ತಿರುವವರು ಕನ್ನಡ ಕಿರುತೆರೆಯ ಮಟ್ಟಿಗೆ ನೀವೇ.<br /> <br /> ಹೌದು. ರೈಟ್ ಪ್ರಮ್ ದಿ ಡೇ ಒನ್ ನಾನು ಕಿರುತೆರೆಯಲ್ಲಿ ಕ್ರಿಯಾಶೀಲನಾಗಿದ್ದೇನೆ. 1987-88ರಲ್ಲಿ `ಬಾಲ ಏಸು~ ಟೆಲಿಫಿಲಂ ಮಾಡಿದೆ. ಅಲ್ಲಿಂದ ಸತತವಾಗಿ ಕ್ಯಾಮೆರಾ, ನಿರ್ದೇಶನ ಎರಡನ್ನೂ ಮಾಡ್ತಾ ಇದ್ದೇನೆ. <br /> <br /> ಅಶೋಕ ಕಶ್ಯಪ್, ಅಶೋಕ ನಾಯ್ಡು, ನಾಗರಾಜ ಆದವಾನಿ ಮುಂತಾದವರು ಕ್ಯಾಮೆರಾ, ನಿರ್ದೇಶನ ಎರಡನ್ನೂ ಮಾಡಿದ್ದಾರೆ. ಆದರೆ ಎರಡೂ ಒಟ್ಟೊಟ್ಟಿಗಿನ ನಿರಂತರತೆಯಲ್ಲಿ ನನ್ನದು ದಕ್ಷಿಣ ಭಾರತದಲ್ಲೇ ದಾಖಲೆ ಅಂತ ಹೇಳ್ತಾರೆ.</p>.<p><strong>ಈ ವಿಷಯದಲ್ಲಿ ನಿಮಗೆ ನೀವೇ ಸಾಟಿ. ನಿಮ್ಮಳಗಿನ ನಿರ್ದೇಶಕ ಮತ್ತು ಕ್ಯಾಮೆರಾಮನ್ ಜತೆ ತಾಕಲಾಟ ಬರುವುದಿಲ್ಲವೆ? </strong><br /> ನಾನು ಮೊದಲೇ ಹೇಳಿದ ಹಾಗೆ ಹೆಚ್ಚಾಗಿ ಅನುಕೂಲವೇ ಆಗಿದೆ. ಇಬ್ಬರಿಗೂ ಒಳ್ಳೆಯ ತಿಳಿವಳಿಕೆ ಇದೆ. ಅಷ್ಟಕ್ಕೂ ನಿರ್ದೇಶಕ ಏನನ್ನೇ ಆಗಲಿ, ಕ್ಯಾಮೆರಾ ಕಣ್ಣಿನಿಂದ ತೋರಿಸಬೇಕು. ಎರಡೂ ನಾನೇ ಆಗಿರುವುದರಿಂದ ಒಳ್ಳೆಯದೇ ಆಗಿದೆ. <br /> <br /> ಕ್ಯಾಮೆರಾಮನ್ ಚೆನ್ನಾಗಿ ದೃಶ್ಯೀಕರಿಸಬಹುದು ಅನಿಸಿದ್ದನ್ನು ಕೆಲವು ಸಲ ಮಾಡಲಿಕ್ಕಾಗದೇ ಇರಬಹುದು. ಯಾಕೆಂದರೆ ಅವನ ಸೂತ್ರಧಾರ ನಿರ್ದೇಶಕ. ಸಹಜವಾಗಿ ನಿರ್ದೇಶಕನಿಗೆ ಕೆಲವು ಮಿತಿಗಳು ಇರುತ್ತವೆ. ಆಗ ಕ್ಯಾಮೆರಾಮನ್ ನೊಂದುಕೊಳ್ತಾನೆ. ಕೆಲವೊಮ್ಮೆ ನನಗೆ ಹಾಗಾಗಿದೆ.</p>.<p><strong>ಟಿವಿ ಧಾರಾವಾಹಿಗಳ ಚಿತ್ರೀಕರಣ ಹೆಚ್ಚಾಗಿ ಮನೆಗಳಲ್ಲೇ ನಡೆಯುತ್ತದೆ. ಹಾಗಾಗಿ ನಿಮ್ಮ ದ್ವಿಪಾತ್ರ ಹಗುರ ಅನಿಸ್ತದೆಯಾ?<br /> </strong>ಹಾಗೇನಿಲ್ಲ. ಮುಕ್ಕಾಲು ಬಾಗ ಚಿತ್ರೀಕರಣ ಬೆಂಗಳೂರಿನ ಶೂಟಿಂಗ್ ಮನೆಗಳಲ್ಲಿ ನಡೆಯುತ್ತೆ, ನಿಜ. <br /> <br /> ಆ ಕಾರಣಕ್ಕೆ ಹಗುರಂತ ಏನೂ ಇಲ್ಲ. ಎರಡೂ ಪಾತ್ರ ನಿರ್ವಹಿಸಲೇಬೇಕು. ಹೊರಾಂಗಣಕ್ಕೆ ಬೆಂಗಳೂರು ಸಮೀಪದ ಹಳ್ಳಿ, ಹಸಿರು, ಬಂಡೆಗಳ ಪರಿಸರಕ್ಕೆ ಹೋಗ್ತೇವೆ.</p>.<p>ಯಾಕೆ ದೂರ ಹೋಗೋಕಾಗಲ್ವೆ? ಸಮುದ್ರ ತೀರ ಅಥವಾ ಉತ್ತರ ಕರ್ನಾಟಕ...<br /> ಕೆಲವು ದೃಶ್ಯಗಳಿಗೆ ವಿಶಾಲವಾದ ಬಯಲು ಬೇಕು ಅನಿಸುತ್ತೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ಅಂತಹ ವಿಸ್ತಾರ ಪ್ರದೇಶಗಳಿವೆ. <br /> <br /> ಏಕಾಕಿತನ ತೋರಿಸಬೇಕಾದರೆ ಇಂತಹ ಕಡೆ ವ್ಯಕ್ತಿ ನಡೆದು ಬರುವ ದೃಶ್ಯ ಚಿತ್ರೀಕರಿಸುವುದು ಸೂಕ್ತ ಅಂತ ನನ್ನೊಳಗಿನ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಇಬ್ಬರಿಗೂ ಒಟ್ಟಿಗೇ ಅನಿಸುತ್ತೆ. ಆದರೆ ಎಲ್ಲವನ್ನೂ ಬಜೆಟ್ ನಿರ್ಧಾರ ಮಾಡುತ್ತೆ!</p>.<p><strong>ಒಳ್ಳೆಯ ಕ್ಯಾಮೆರಾಮನ್ ಆಗಿದ್ದುಕೊಂಡು ಇತರರ ನಿರ್ದೇಶನದ ಧಾರಾವಾಹಿಗಳಿಗೆ ಕೆಲಸ ಮಾಡಿದ್ದೀರಲ್ಲವೆ</strong>?<br /> ಅವೂ ಮಾಡಿದ್ದೇನೆ. ಸೇತುರಾಮ್ರ `ಮಂಥನ~ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬರೀ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದೇನೆ. ಆದರೆ ದ್ವಿಪಾತ್ರವೇ ಹೆಚ್ಚು.</p>.<p><strong>ಹಾಗಾದರೆ ನಿಮ್ಮದು ದಾಖಲೇನೆ ಸರಿ. ಹೀಗೆ ಹೆಚ್ಚಿನ ಹೊರೆಯಾದರೆ ಕಲಾವಿದರ ಮೇಲೆ ನಿಮಗೆ ನಿಯಂತ್ರಣ ಉಳಿಯುತ್ತದೆಯೇ?<br /> </strong>ಅದೇನು ತೊಂದ್ರೆ ಇಲ್ಲ. ವೃತ್ತಿ ಕಲಾವಿದರಾದರೆ ತೊಂದರೆ ಇಲ್ಲವೇ ಇಲ್ಲ. ಸ್ವಲ್ಪ ಹೇಳಿದ ತಕ್ಷಣ ಎಲ್ಲ ಅರಿತುಕೊಳ್ತಾರೆ. ಭಾವನೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬೇಸಿಕ್ ವಿಷಯ ಅವರಿಗೆ ಗೊತ್ತಿರ್ತದೆ. ಹೊಸಬರಾದರೆ ಸ್ವಲ್ಪ ಕಷ್ಟ.</p>.<p><strong>ಕ್ಯಾಮೆರಾ, ನಿರ್ದೇಶನ ಒಟ್ಟಿಗೇ ಮಾಡಿ. ಆದರೆ ಕೆಲಸ ಹಗುರ ಮಾಡಿಕೊಳ್ಳಲು ಸಂಚಿಕೆ ನಿರ್ದೇಶಕರ ಸಹಾಯ ಪಡೆಯಬಹುದಲ್ವೆ?</strong><br /> ಇಲ್ಲ. ಎಲ್ಲ ನಾನು ಮಾಡಿದಾಗಲೇ ಸಂತೋಷ.<br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>