ಬೆಂಗಳೂರು: ಅನಿಲ್ ಮಲ್ನಾಡ್ ಚೆನ್ನೈನ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದರು. ಸೂಕ್ಷ್ಮಮತಿಯ ಸಂಕಲನಕಾರರಾಗಿದ್ದ ಅನಿಲ್ ಮಲ್ನಾಡ್(65) ಕನ್ನಡದ ಅರಿವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
ತೆಲುಗಿನ ಸಿತಾರ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅವರು ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಅವಾರ್ಡ್ ಸೇರಿ 32 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಬೇಡಿಕೆಯ ಸಂಕಲನಕಾರರಾಗಿದ್ದರು.
ಕನ್ನಡ, ತಮಿಳು, ತೆಲುಗು, ಹಿಂದಿ, ಒರಿಯಾ, ಕೊಂಕಣಿ, ತುಳು, ಬಂಗಾಳಿ ಸೇರಿ ಸುಮಾರು 200 ಚಿತ್ರಗಳ ಸಂಕಲನ ಮಾಡಿದ್ದಾರೆ.