ನಿರ್ಮಾಪಕ: ಸೂರ್ಯ ಮೋಹನ್
ನಿರ್ದೇಶಕ: ವಿಷ್ಣುಪ್ರಿಯನ್
ತಾರಾಗಣ: ಶ್ರೀಹರಿ, ಸೂರ್ಯ ಮೋಹನ್, ದಿಶಾ ಪೂವಯ್ಯ, ಪ್ರಶಾಂತ್ರಾಜ್, ಪಂಚತಾರಾ ಶ್ರೀನಿವಾಸ್, ಬದ್ರಿ, ಸೌಜನ್ಯ ಇತರರು.
>ರಾಜ್ಯದಲ್ಲಿ ತೀವ್ರ ಬರ. ಮಳೆಯ ಬರ ಒಂದೆಡೆಯಾದರೆ, ಗಂಡುಗಳಿಗೆ ಸಾಕಷ್ಟು ಹೆಣ್ಣಿಲ್ಲ ಎನ್ನುವ ಬರ ಇನ್ನೊಂದೆಡೆ. ಆಡಳಿತದ ಚುಕ್ಕಾಣಿ ಹಿಡಿದಾತ ಮೊದಲು ಬಗೆಹರಿಸಲು ಮುಂದಾಗುವುದು ಹೆಣ್ಣುಗಳ ಬರವನ್ನು. ಅದಕ್ಕೆ ಆತ ಮೊರೆಹೋಗುವುದು ಲೋಕಕಲ್ಯಾಣಕ್ಕಾಗಿ ತನ್ನನ್ನು ಮುಡಿಪಾಗಿಟ್ಟುಕೊಂಡ ಸ್ವಾಮೀಜಿಯ ಬಳಿ. `ಆಪರೇಷನ್ ಗರ್ಲ್ಸ್' ಹೆಸರಿನಲ್ಲಿ ಈ ಸ್ವಾಮೀಜಿ ದೇಶವಿದೇಶದಲ್ಲಿರುವ ತನ್ನ ಆಶ್ರಮಗಳ ಅವಿವಾಹಿತ ಮಹಿಳೆಯರನ್ನು ಕರೆಯಿಸಿ ಮದುವೆ ಮಾಡಿಸುವ ಯೋಜನೆ ರೂಪಿಸುತ್ತಾರೆ!