ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಈ ರಾಶಿಯವರಿಗೆ ಹಿರಿಯರಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ ಇದೆ
Published 4 ಮೇ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮಲ್ಲಿ ಅಧಿಕಾರ ಮನೆ ಮಾಡಿರುತ್ತದೆ. ಧನದಾಯವು ಉತ್ತಮವಾಗಿರುತ್ತದೆ. ಮಂತ್ರೋಪಾಸಕರಿಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ. ಗುರುಗಳಿಗೆ ಪಂಡಿತರುಗಳಿಗೆ ಗೌರವಗಳು ದೊರೆಯುತ್ತವೆ. ನಿಮ್ಮ ಕೆಲಸ ಕಾರ್ಯಗಳು ಅನಿಶ್ಚಿತತೆ ಇರುತ್ತದೆ. ಸ್ಥಿರಾಸ್ತಿ ಮಾಡುವ ಯೋಗವಿದ್ದರೂ ಅದರ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ವೇದಾಧ್ಯಯನ ವಿಧ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ. ಸಾಂಪ್ರದಾಯಿಕ ವೈದ್ಯರುಗಳಿಗೆ ಬೇಡಿಕೆ ಹೆಚ್ಚಲಿದೆ. ಕಣ್ಣಿನ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಸಂಗಾತಿಯು ನಿಮಗೆ ಸಹಕರಿಸುವರು. ರಕ್ಷಣಾ ವಿಭಾಗಕ್ಕೆ ಕಚ್ಚಾ ವಸ್ತುಗಳನ್ನು ಪೂರೈಸುವವರಿಗೆ ಹೆಚ್ಚು ಅವಕಾಶ ದೊರೆಯಲಿದೆ. ಅನಿರೀಕ್ಷಿತ ಘಟನೆಯೊಂದು ನಿಮ್ಮ ವಿದೇಶ ಯಾತ್ರೆಗೆ ತಡೆಯೊಡ್ಡಬಹುದು. ಕೃಷಿಗೆ ಸಂಬಂಧಿಸಿದ ಸಲಕರಣೆ ಮಾರಾಟಗಾರರಿಗೆ ಹೆಚ್ಚಿನ ಆದಾಯ ಇರಲಿದೆ.
ವೃಷಭ
ಬಹಳ ಗಾಂಭೀರ್ಯತೆ ನಿಮ್ಮಲ್ಲಿ ಇರುತ್ತದೆ. ದೈವಭಕ್ತಿ ಹೆಚ್ಚಾಗಲಿದೆ. ಧನಾದಾಯವು ನಿಮ್ಮ ನಿರೀಕ್ಷೆಯನ್ನು ಪೂರೈಸುತ್ತದೆ. ನಿಮ್ಮ ಕೆಲಸ ಕಾರ್ಯಗಳಿಂದ ಹಣ ಗಳಿಸಲು ಪ್ರಯತ್ನ ಪಡುವಿರಿ. ಆಸ್ತಿ ವಿಚಾರಗಳಲ್ಲಿ ದಾಖಲೆಗಳಲ್ಲಿ ಮೋಸ ಆಗಬಹುದು ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕಿಂತ ಕಡಿಮೆ ಯಶಸ್ಸು ದೊರೆಯಬಹುದು. ಗರ್ಭಕೋಶದ ಸಮಸ್ಯೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. ಸಂಗಾತಿ ಮಾಡಿದ ಸಾಲಗಳನ್ನು ನೀವು ತೀರಿಸಬೇಕಾಗಬಹುದು. ಯಂತ್ರಗಳನ್ನು ದುರಸ್ತಿ ಮಾಡುವವರಿಗೆ ಬೇಡಿಕೆ ಹೆಚ್ಚಾಗಿ ಆದಾಯ ಹೆಚ್ಚಲಿದೆ. ಕವಿಗಳಿಗೆ ಹೆಚ್ಚು ಗೌರವ ದೊರೆಯುತ್ತದೆ. ತಂದೆಯಿಂದ ವ್ಯಾಪಾರ ವಹಿವಾಟುಗಳ ಬಗ್ಗೆ ತಿಳಿವಳಿಕೆ ದೊರೆಯಲಿದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಕೈ ಕಚ್ಚುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಸಾಕಷ್ಟು ಗೊಂದಲಗಳಿದ್ದರೂ ನಿಮ್ಮ ಉದ್ಯೋಗಕ್ಕೆ ತೊಂದರೆ ಇರುವುದಿಲ್ಲ. ವಿದೇಶಿ ವ್ಯವಹಾರ ಮಾಡುವವರಿಗೆ ಸಾಕಷ್ಟು ಅನುಕೂಲವಿರುತ್ತದೆ.
ಮಿಥುನ
ವ್ಯವಹಾರಿಕವಾಗಿ ಬಹಳ ಚತುರರಾಗಿರುವಿರಿ. ಧನಾದಾಯವು ಮಧ್ಯಮ ಗತಿಯಲ್ಲಿ ಇರುತ್ತದೆ. ಕೆಲಸ ಕಾರ್ಯಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಆಸ್ತಿ ಖರೀದಿಯ ವಿಚಾರ ದಲ್ಲಿ ಅಲ್ಪ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ತಲೆ ನೋವು ಕೆಲವರನ್ನು ಬಾಧಿಸಬಹುದು. ಸರ್ಕಾರಿ ಸಾಲಗಳಿಂದ ನಿಮಗೆ ಅನುಕೂಲವಾಗಲಿದೆ. ಸಂಗಾತಿಯ ಆದಾಯ ಇಳಿಮುಖವಾಗಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ಹಿರಿಯರಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ ಇದೆ. ತಂದೆ ಮಕ್ಕಳ ನಡುವೆ ಅಥವಾ ಗುರುಹಿರಿಯರ ನಡುವೆ ಮನಸ್ತಾಪ ಮಾಡಿಕೊಳ್ಳಬೇಡಿ. ವೃತ್ತಿಯಲ್ಲಿ ಅಧಿಕ ಪ್ರಸಂಗತನ ಖಂಡಿತಾ ಬೇಡ. ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಸ್ಥಾನಮಾನ ಸಿಗುವ ಸಂದರ್ಭವಿದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಈಗ ಸ್ವಲ್ಪ ಲಾಭವಿರುತ್ತದೆ.
ಕರ್ಕಾಟಕ
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರವಿರಲಿ. ಧನಾದಾಯವು ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಬಂಧುಗಳ ನಡುವೆ ಭಿನ್ನಾಭಿಪ್ರಾಯ ಬಂದು ಕೆಲಸಗಳು ನಿಲ್ಲಬಹುದು. ಸಂಘ ಸಂಸ್ಥೆಗಳಲ್ಲಿ ಆಸ್ತಿಯನ್ನು ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗುವ ಯೋಗವಿದೆ. ವಾಯು ಪ್ರಕೋಪ ಕಾಣಿಸಬಹುದು. ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ಸಂಗಾತಿಯಿಂದ ನಿರೀಕ್ಷಿತ ಸಹಕಾರಗಳು ಸಿಗುವುದು ಕಡಿಮೆ. ಹಣಕಾಸಿನ ಸಂಸ್ಥೆಗಳಿಗೆ ಲಾಭವಾಗುವ ಸಾಧ್ಯತೆಗಳಿವೆ. ಸಂಗಾತಿಯ ಆಸೆಯಂತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವಿರಿ. ಸರ್ಕಾರಿ ಲೆಕ್ಕಪರಿಶೋಧಕರಿಗೆ ಸ್ವಲ್ಪ ತೊಂದರೆ ಎದುರಾಗಬಹುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಸರ್ಕಾರಿ ವಲಯದಿಂದ ಎಚ್ಚರಿಕೆ ಪತ್ರ ಬರಬಹುದು. ವೃತ್ತಿಯಲ್ಲಿ ಬುದ್ಧಿವಂತಿಕೆಯಿಂದ ನಿಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವಿರಿ.
ಸಿಂಹ
ಒಂದು ರೀತಿಯ ಅಧಿಕಾರವಾಣಿ ನಿಮ್ಮಲ್ಲಿ ಇರುತ್ತದೆ. ಮಾತನಾಡುವಾಗ ಧರ್ಮ ಸೂಕ್ಷ್ಮದಂತೆ ಮಾತನಾಡಿ ಎದುರಾಳಿಯನ್ನು ಸಿಕ್ಕಿಸುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮ ಹಿರಿಯರು ಹಾಗೂ ಮಹಿಳೆಯರು ಸಹಕಾರ ವನ್ನು ನೀಡುವರು. ಭೂಮಿಯನ್ನು ಕೊಳ್ಳುವ ಉತ್ಸಾಹ ಬೇಡ. ವಿದ್ಯಾರ್ಥಿಗಳಿಗೆ ಅಧ್ಯಯನ ದಲ್ಲಿ ಹೆಚ್ಚು ಆಸಕ್ತಿ ಮಾಡುತ್ತದೆ. ಮೂಳೆ ತೊಂದರೆಗಳು ಅಥವಾಮೀನಖಂಡದನೋವು ಗಳು ಕಾಣಿಸಬಹುದು. ಸಂಗಾತಿಯು ಅತಿಹೆಚ್ಚು ಶ್ರಮ ವಹಿಸಿ ನಿಮ್ಮ ಕೆಲಸ ಕಾರ್ಯಗಳಿಗೆ ಸಹ ಕರಿಸುವರು. ಆಮದು ಮತ್ತು ರಫ್ತುಮಾಡುವವ ರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ವಿದೇಶಿ ವ್ಯವಹಾರ ನಡೆಸುವವರಿಗೆ ಅನಿರೀಕ್ಷಿತವಾಗಿ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ. ತಂದೆ ಅಥವಾ ಹಿರಿಯರಿಂದ ಈಗ ಹಣಕಾಸಿನ ಸಹಾಯ ದೊರೆಯಬಹುದು.
ಕನ್ಯಾ
ಗಟ್ಟಿ ಮನಸ್ಸು ಮಾಡಿಕೊಂಡು ಕೆಲಸಕಾರ್ಯ ಮಾಡುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬಂಧುಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುವಿರಿ. ಆಸ್ತಿ ಖರೀದಿ ಮಾಡಲು ಹಣ ಒಗ್ಗೂಡಿಸುವಿರಿ. ಮಕ್ಕಳಿಂದ ನಿರೀಕ್ಷಿತ ಸಹಾಯಗಳು ದೊರೆಯದಿರಬಹುದು. ಈಗ ವಿದ್ಯಾರ್ಥಿಗಳಿಗೆ ಅಂತಹ ಶ್ರೇಯಸ್ಸು ಇರುವುದಿಲ್ಲ. ಸಾಲಗಾರರ ಕಾಟ ಎದುರಾಗುವ ಸಾಧ್ಯತೆ ಇದೆ. ಅಜೀರ್ಣ ರೀತಿಯ ಹೊಟ್ಟೆ ಸಂಬಂಧಿತ ದೋಷಗಳು ಕಾಡಬಹುದು. ಸಂಗಾತಿಯ ನಾಸ್ತಿಕತೆ ಸ್ವಲ್ಪ ಬೇಸರ ತರಿಸುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಕಾಲಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಿ. ಸಂಸ್ಥೆಗಳಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸೌಮ್ಯವಾಗಿ ನಡೆದುಕೊಳ್ಳುವುದು ಉತ್ತಮ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಸಂಗಾತಿಗೆ ಅವರ ತಂದೆ ಕಡೆಯಿಂದ ಸಹಾಯ ದೊರೆಯುತ್ತದೆ.
ತುಲಾ
ತಂತ್ರಗಳನ್ನು ರೂಪಿಸುವ ಶಕ್ತಿ ನಿಮಗೆ ಒದಗಿ ಬರಲಿದೆ. ಧನದಾಯವು ಮಂದಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಗಳು ಸಮಾಜಕ್ಕೆ ಬೇಸರ ತರಿಸಬಹುದು. ಕೃಷಿ ಭೂಮಿಯನ್ನು ಕೊಳ್ಳುವ ಆಸೆ ಹೆಚ್ಚುತ್ತದೆ. ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿರುವವರಿಗೆ ಅನುಕೂಲವಿರುತ್ತದೆ. ಕೆಲವರಿಗೆ ಚರ್ಮರೋಗ ಕಾಡಬಹುದು. ಸಂಗಾತಿಗೆ ಸರ್ಕಾರಿ ಕೆಲಸ ಅಥವಾ ಸರ್ಕಾರಿ ಸಹಾಯಧನ ಸಿಗಲಿದೆ. ಧಾರ್ಮಿಕ ಚಿಂತನೆಗಳನ್ನು ಜನರಿಗೆ ತಿಳಿಸುವವರಿಗೆ ಹೆಚ್ಚು ಗೌರವ ದೊರೆಯುತ್ತದೆ ಹಾಗೂ ಸಮಾಜದಿಂದ ದೇಣಿಗೆ ಸಿಗುವ ಸಂದರ್ಭವಿದೆ. ಸಂಗಾತಿಗಾಗಿ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭ ಎದುರಾಗಬಹುದು. ಸೇನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯ ನಡೆಸುವವರಿಗೆ ಅಧಿಕ ಆದಾಯ. ವಾಯು ಸಂಬಂಧಿ ತೊಂದರೆಗಳು ಸ್ವಲ್ಪ ಕಾಡಬಹುದು.
ವೃಶ್ಚಿಕ
ನಿಮ್ಮಲ್ಲಿ ಸಾಮರ್ಥ್ಯವಿದ್ದರೂ ಅದನ್ನು ಹೊರ ತರಲು ಒದ್ದಾಡುವಿರಿ. ಧನಾದಾಯವು ಚೇತರಿಕೆಯ ಹಾದಿಯಲ್ಲಿರುತ್ತದೆ. ಕೃಷಿಯಿಂದ ಸಾಕಷ್ಟು ಅನುಕೂಲವಿರುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲ ಸಿಗಲಿದೆ. ವಿದ್ಯಾರ್ಥಿಗಳು ಹೊಸ ಓದಿಗಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸರಿಯದ ಆಲೋಚನೆಯಿಂದ ಆಯ್ಕೆ ಮಾಡಿ. ಪ್ರಸೂತಿ ತಜ್ಞರಿಗೆ ಹಾಗೂ ಕಣ್ಣಿನ ವೈದ್ಯರಿಗೆ ಬೇಡಿಕೆ ಹೆಚ್ಚು. ಸಂಗಾತಿಯಿಂದ ಸಾಕಷ್ಟು ಧನ ಸಹಾಯ ಸಿಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ಆದಾಯ ಇರುತ್ತದೆ. ಕೃಷಿಯಿಂದ ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಗೊಂದಲದ ವಾತಾವರಣ ತಲೆದೋರಬಹುದು. ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ. ದಿನಸಿ ಸಗಟು ದಾಸ್ತಾನುದಾರರಿಗೆ ನಿರೀಕ್ಷೆಯಷ್ಟು ದಿನಸಿ ದಾಸ್ತಾನು ಮಾಡಬಹುದು. ನಿಮ್ಮ ಖಾಯಿಲೆಯ ಪರಿಹಾರಕ್ಕಾಗಿ ದೈವದ ಮೊರೆ ಹೋಗುವಿರಿ.
ಧನು
ವಾರದ ಆರಂಭದಲ್ಲಿ ಸ್ವಲ್ಪ ಆಲಸ್ಯ ಇರುತ್ತದೆ. ಆದಾಯವೂ ಕಡಿಮೆ ಇದ್ದರೂ ಹಣಕಾಸಿನ ನಿರ್ವಹಣೆ ಸರಿಯಾಗಿರಲಿದೆ. ಕೆಲವು ರಾಜಕಾರಣಿಗಳು ಬಳಸುವ ತಂತ್ರಗಳು ಸರಿಯಾಗಿ ಪರಿಣಾಮ ಬೀರುತ್ತವೆ. ಹಿರಿಯರಿಂದ ನಿಮಗೆ ಸೂಕ್ತ ಸಲಹೆಗಳು ಸಕಾಲದಲ್ಲಿ ದೊರೆಯುತ್ತವೆ. ಆಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಸಾಕಷ್ಟು ಗಲಿಬಿಲಿಗಳಿರುತ್ತವೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಸಮೀಪ ಯಶಸ್ಸು ಸಿಗಲಿದೆ. ಉದರ ಸಂಬಂಧಿತ ದೋಷಗಳು ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಹಣದ ವ್ಯವಹಾರಗಳನ್ನು ಮಾಡು ವುದು ಅಷ್ಟು ಸೂಕ್ತವಲ್ಲ.ಸಂಗಾತಿಯು ಖರೀದಿ ಮಾಡಿದ್ದ ಆಸ್ತಿಯಲ್ಲಿ ತೊಂದರೆಗಳು ಬರುವ ಸೂಚನೆ ಇದೆ. ತಂದೆಯಿಂದ ಆಸ್ತಿ ದೊರೆಯುವ ಸಾಧ್ಯತೆ ಇದೆ. ವೃತ್ತಿ ಧರ್ಮದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಗಿಲೀಟಿನ ಆಭರಣ ತಯಾರಕರಿಗೆ ಬೇಡಿಕೆ ಹೆಚ್ಚು. ವ್ಯವಹಾರಗಳಲ್ಲಿ ಅನಿರೀಕ್ಷಿತ ತಿರುವು ಪಡೆದು ನಿಮ್ಮ ಧನಾದಾಯಕ್ಕೆ ಕಾರಣವಾಗುತ್ತದೆ.
ಮಕರ
ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಆದಾಯವು ಕಡಿಮೆ ಇದ್ದರೂ ಅದರಲ್ಲೇ ನಿಭಾಯಿಸುವಿರಿ. ನಿಮ್ಮ ಚಟುವಟಿಕೆಗಳಿಗೆ ಹಿತ ಶತ್ರುಗಳು ಅಡ್ಡ ಬರುವರು. ಭೂಮಿಯ ವ್ಯಾಪಾರದಲ್ಲಿ ಲಾಭ ಸಿಗಲಿದೆ. ಭೂಮಿಯನ್ನು ಕೊಳ್ಳುವ ಯೋಗ ಬಂದಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅತಿ ಹೆಚ್ಚು ಯಶಸ್ಸು ಸಿಗಲಿದೆ. ಚರ್ಮದ ಕಾಯಿಲೆಗಳಿರುವವರು ಎಚ್ಚರವಹಿಸಿ. ನಿಮ್ಮ ಸಂಗಾತಿಯ ನಡವಳಿಕೆಗಳು ನಿಮಗೆ ಬೇಸರ ತರಿಸಬಹುದು. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಂಭವವಿದೆ. ತಂದೆಯಿಂದ ಕುಲಾಚಾರದ ಬಗ್ಗೆ, ಕುಲದ ರೀತಿ ರಿವಾಜುಗಳ ಬಗ್ಗೆ ತಿಳಿಯಬಹುದು. ತಾಯಿಯು ನಿಮ್ಮ ಸಂಸಾರಕ್ಕೆ ಸಹಕಾರ ನೀಡಲಿದ್ದಾರೆ. ನಿಮ್ಮ ನಡವಳಿಕೆಯಲ್ಲಿ ನಿಗೂಢತೆ ಇರುತ್ತದೆ. ತಂದೆಯ ಧಾರ್ಮಿಕ ಕೆಲಸಗಳು ನಿಮಗೂ ಒಳಿತನ್ನು ಮಾಡಲಿದೆ. ವೃತ್ತಿಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.
ಕುಂಭ
ವಹಿಸಿಕೊಂಡ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಧನಾದಾಯವು ಮಂದಗತಿಯಲ್ಲಿರುತ್ತದೆ. ಹಿರಿಯರು ತಮ್ಮ ಕಾರ್ಯ ಚಟುವಟಿಕೆಗಳಿಂದ ಸಮಾಜದಲ್ಲಿ ಗೌರವ ಪಡೆಯುವರು. ದೇವಾಲಯಗಳಿಗೆ ಅಥವಾ ಮಠ ಮಾನ್ಯಗಳಿಗೆ ಅಪೇಕ್ಷಿತ ಜಾಗ ಸಿಗಲಿದೆ. ಆಸ್ತಿ ಕೊಳ್ಳಲು ಹಣ ಒಟ್ಟುಮಾಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಕಣ್ಣಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ನಿಮ್ಮ ಚಟುವಟಿಕೆಗಳಿಂದ ವ್ಯವಹಾರಗಳಲ್ಲಿ ಲಾಭಗಳಿಸಲು ಪ್ರಯತ್ನಿಸುವಿರಿ. ಕೃಷಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ವೃತ್ತಿಯಲ್ಲಿ ಹಿರಿಯ ಮಹಿಳಾಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡಬಹುದು ಹಾಗೂ ಶಿಕ್ಷೆಗೆ ಗುರಿಪಡಿಸಬಹುದು. ಹಿರಿಯರ ಆಸ್ತಿ ಸಿಗುವ ಯೋಗವಿದೆ. ನಿಮ್ಮ ಸರ್ಕಾರಿ ದಾಖಲೆಗಳಲ್ಲಿ ಇದ್ದ ವ್ಯತ್ಯಾಸಗಳನ್ನು ಈಗ ಸರಿ ಪಡಿಸಿಕೊಳ್ಳಬಹುದು.
ಮೀನ
ನಿಮ್ಮ ನಿರ್ಧಾರಗಳಲ್ಲಿ ಸಾಕಷ್ಟು ದ್ವಂದ್ವಗಳಿರುತ್ತವೆ. ಸ್ಥಿರ ನಿರ್ಧಾರಗಳು ಬಹಳ ಮುಖ್ಯ. ಹಣದ ಒಳಹರಿವು ಉತ್ತಮವಾಗಿರು ತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಗುರು ಹಿರಿ ಯರ ಸಹಕಾರಗಳು ದೊರೆಯುತ್ತವೆ. ಸಂಸಾರ ದಲ್ಲಿ ಸಂತೋಷವಿದ್ದರೂ ಸ್ವಲ್ಪ ಮುನಿಸುಗಳು ಇರುತ್ತವೆ. ಆಸ್ತಿ ಮಾಡುವ ವಿಚಾರದಲ್ಲಿ ಎಚ್ಚರ ವಾಗಿರಿ, ಧನ ನಷ್ಟವಾಗಬಹುದು. ವಿದ್ಯಾರ್ಥಿಗ ಳಿಗೆ ಸಾಮಾನ್ಯಫಲಿತಾಂಶ ಇರುತ್ತದೆ.ಶೀತಬಾಧೆ ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿರಿ. ಸಂಗಾತಿಯ ಧರ್ಮಭೀರುತನದಿಂದ ನಿಮಗೆ ಬೇಸರ ಆಗಬಹುದು.ಕಬ್ಬಿಣದ ವ್ಯಾಪಾರ ಮಾಡುವವರಿಗೆ ಆದಾಯ ಕಡಿಮೆ ಇದ್ದರೂ ನಷ್ಟವಿರುವುದಿಲ್ಲ. ಪಾದದ ನೋವು ಕೆಲವರಿಗೆ ಕಾಣಿಸಬಹುದು.ರಾಜಕಾರಣಿಗಳಿಗೆ ಹೆಚ್ಚಿನ ಅನುಕೂಲತೆ ಒದಗುವಸಾಧ್ಯತೆಗಳಿವೆ.ಆಭರಣ ಕೊಳ್ಳಲು ಹಣ ಖರ್ಚು ಮಾಡುವಿರಿ. ಗಿಲಿಟಿನ ಆಭರಣ ತಯಾರಕರಿಗೆ ಹೆಚ್ಚುವ್ಯಾಪಾರ ಇರುತ್ತದೆ.