2002ರಲ್ಲಿ ‘ಕಂಪನಿ‘ ಸಿನಿಮಾದ ಮೂಲಕಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವನ ಕತೆಯನ್ನು ಬೆಳ್ಳಿತೆರೆಗೆ ತಂದು ಯಶಸ್ವಿಯಾಗಿರುವ ವರ್ಮಾ ಈ ವೆಬ್ ಸಿರೀಸ್ ಮೂಲಕ ಮತ್ತೊಮ್ಮೆ ದಾವೂದ್ ಕತೆಯನ್ನು ಹೇಳಲು ಹೊರಟಿದ್ದಾರೆ. ಮುಂಬೈನ 80ರ ದಶಕದ ಭೂಗತಲೋಕ ಮತ್ತು 1993ರ ಮುಂಬೈ ಬಾಂಬ್ ಸ್ಫೋಟ ಘಟನಾವಳಿಗಳನ್ನು ಎಳೆ, ಎಳೆಯಾಗಿ ತೆರೆದಿಡಲು ಸಜ್ಜಾಗಿದ್ದಾರೆ.