ಇದು ಮಹಾಭಾರತದಿಂದ ಪ್ರೇರಿತಗೊಂಡು ರಚಿಸಿದ ನೃತ್ಯನಾಟಕ. ಇದರಲ್ಲಿ ಹದಿನೆಂಟು ದಿನಗಳ ಕಾಲ ನಡೆದ ಕುರುಕ್ಷೇತ್ರದ ಯುದ್ಧದ ದೃಶ್ಯಗಳು, ಒಬ್ಬೊಬ್ಬರ ಸಾಮರ್ಥ್ಯ, ಸಮರ ಕಲೆ, ಬುದ್ಧಿವಂತಿಕೆ, ಯುದ್ಧತಂತ್ರ ಇತ್ಯಾದಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ನೃತ್ಯ ನಾಟಕದ ಮೂಲಕ ಶ್ರೀಕೃಷ್ಣನ ಧರ್ಮದ ನಡೆಯನ್ನು ಸಾಕ್ಷಾತ್ಕರಿಸುವ ದರ್ಶನ ಮಾಡಲಾಗುತ್ತದೆ ಎಂದು ಪ್ರಭಾತ್ ನೃತ್ಯತಂಡ ಹೇಳಿದೆ.