‘ಮಲ್ಲೇಶ್ವರಂ ಸಂಗೀತ ಸಭಾ’ ನಗರದ ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಒಂದು. ಏಳು ದಶಕಗಳಿಂದ ನಿರಂತರವಾಗಿ ಸಂಗೀತ ಪ್ರಿಯರ ಮನತಣಿಸುತ್ತಾ ಬರುತ್ತಿದೆ.
2018ರ ಕೊನೆಯ ಕಾರ್ಯಕ್ರಮವಾಗಿ ಕೃತಿಕಾ ಶ್ರೀನಿವಾಸನ್ ಗಾಯನ ಕಾರ್ಯಕ್ರಮವನ್ನು ಮಲ್ಲೇಶ್ವರದ ರಾಮಮಂದಿರದಲ್ಲಿ ಏರ್ಪಡಿಸಲಾಗಿತ್ತು. ಸಂಗೀತ ದಿಗ್ಗಜರು ಈ ಹಿಂದೆ ಪಾಲಿಸಿಕೊಂಡು ಬರುತ್ತಿದ್ದ ಸಾಂಪ್ರದಾಯಿಕ ಅಚ್ಚುಕಟ್ಟುತನ, ಕಛೇರಿಯಉದ್ದಗಲಕ್ಕೂ ಪ್ರತಿಧ್ವನಿಸಿತು.
ಆಹಿರ್ ಭೈರವ್ ರಾಗದಲ್ಲಿ ಉಗಾಬೊಗ ಪ್ರಸ್ತುತಪಡಿಸಿ ಸದಾಶಿವ ಬ್ರಂಹೇಂದ್ರರ ಪಿಬರೆ ರಾಮರಸಂ ಕೃತಿಯಲ್ಲಿ ಕಛೇರಿ ಸಂಪನ್ನಗೊಂಡಿತು.