‘ನಗರದ ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲೆ ಓದುತ್ತಿದ್ದಾಗ ಸಿಕ್ಕಿದ ಅವಕಾಶ ಬಳಸಿಕೊಂಡು ‘ಧರ್ಮರತ್ನಾಕರ’ ನಾಟಕದ ಮೂಲಕ ರಂಗಭೂಮಿಗೆ ಅಡಿ ಇಟ್ಟೆ. ಹಿರಿಯ ಕಲಾವಿದರಾದ ನಾರಾಯಣ ರೈ, ಕುಮಾರ ಅರಸೇಗೌಡ, ಡಿ.ಟಿ.ಜವರೇಗೌಡ ಅವರ ತಂಡಗಳಲ್ಲಿ ಬಣ್ಣ ಹಚ್ಚಿ ಸಣ್ಣಪುಟ್ಟ ಪಾತ್ರಗಳನ್ನು ಮಾಡ ತೊಡಗಿದೆ. ಬಳಿಕ, ದೊಡ್ಡ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡೆ’ ಎಂದರು.