ಅಶ್ಲೀಲ ಸನ್ನೆ ಮಾಡಿದ್ದರ ಎಫೆಕ್ಟ್?: ಪ್ರಿಯಾಂಕಾ ತಿಮ್ಮೇಶ್ ನಿರ್ಗಮನದ ಸಂದರ್ಭದಲ್ಲಿ ಅಶ್ಲೀಲ ಸನ್ನೆ ಮಾಡುವ ಮೂಲಕ ಚಕ್ರವರ್ತಿ ಚಂದ್ರಚೂಡ್ ಅವರು ವೀಕ್ಷಕರು, ನಿರೂಪಕ ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದಿನಿಂದ ಅವರ ಬಗ್ಗೆ ಅಭಿಪ್ರಾಯವೇ ಬದಲಾಗಿತ್ತು. ವಾರಾಂತ್ಯದಲ್ಲಿ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ವಾರದ ದಿನಗಳಲ್ಲಿ ಒಬ್ಬರು ಯಾರಿಗೂ ಗೊತ್ತಾಗದಂತೆ ಮನೆಯಿಂದ ಹೊರ ಹೋಗುತ್ತಾರೆ. ನಾನು ಶನಿವಾರ, ಇಲ್ಲಿಗೆ ಬರುವ ಹೊತ್ತಿಗೆ ನಿಮ್ಮಲ್ಲಿ ಒಬ್ಬರು ಇರುವುದಲ್ಲ ಎಂದು ಹೇಳಿದ್ದರು. ಅದರಂತೆ, ಚಕ್ರವರ್ತಿಯವರನ್ನು ಹೊರಗೆ ಕಳುಹಿಸಲಾಗಿದೆ.