ಬೆಂಗಳೂರು: ಫಿನಾಲೆ ವಾರದಲ್ಲಿ ಬಿಗ್ ಬಾಸ್ ಮನೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಕೊನೆ ವಾರದಲ್ಲಿ ನಮ್ರತಾ ಮನೆಯಿಂದ ಹೊರಬಂದ ಮನೆ ಬಳಿಕ ಇನ್ನಷ್ಟು ಖಾಲಿಯಾಗಿದೆ.
ಈ ವಾರ ಸದಸ್ಯರಿಗೆ ಪ್ರಶ್ನೆಗಳ ಸುರಿಮಳೆಯಿಂದಲೇ ಆರಂಭಗೊಂಡಿದೆ. ಪ್ರಶ್ನೋತ್ತರ ಕಲಾಪವನ್ನು ನಡೆಸಿಕೊಡಲು ಬಿಗ್ಬಾಸ್ ಹಿಂದಿನ ಸ್ಪರ್ಧಿಯಾದ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ. ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಒಂದೊಂದಾಗಿ ಪ್ರಶ್ನೆಗಳ ಬಾಣವನ್ನು ಒಬ್ಬೊಬ್ಬ ಸ್ಪರ್ಧಿಗೂ ಕೇಳುತ್ತಿದ್ದ ಹಾಗೆ ಅವರ ಮುಖದ ಬಣ್ಣ, ಭಾವ ಬದಲಾಗಿದೆ.
‘ವಿನಯ್ ನಿಮಗೆ ಜೈ ಜೈ ಎನ್ನುವವರೆಲ್ಲ ಹೊರಗಡೆ ಇದ್ದಾರೆ. ಯಾಕೆ ಏನಾಯ್ತು?’ ಎಂದು ವಿನಯ್ಗೆ ಪ್ರಶ್ನೆ ಕೇಳಿದ್ದಾರೆ.
ಕಾರ್ತಿಕ್ ಅವರಿಗೆ, ‘ಮಡಕೆ ಒಡೆದು, ಸಂಗೀತಾ ಇಲ್ಲದೆ ನಾನು ಝೀರೊ ಅಲ್ಲ ಅಂತ ಪ್ರೂವ್ ಮಾಡ್ತೀನಿ ಅಂತ ಹೇಳಿದ್ರಿ… ಪ್ರೂವ್ ಮಾಡಿದ್ರಾ?’
ಇತ್ತ ಸಂಗೀತಾ ಅವರನ್ನು ಗುರಿಯಾಗಿಸಿ ‘ಸಂಗೀತಾ ಅವ್ರೆ, ಪ್ರತಾಪ್ಗೆ ಇರುವ ಜನಬೆಂಬಲ ನೋಡಿ, ನೀವು ಅವರಿಗೆ ಪ್ರತು… ತಮ್ಮಾ ಅಂತ ಬಾಂಡಿಂಗ್ ಕ್ರಿಯೇಟ್ ಮಾಡಿದ್ರಾ? ಅಂದ್ರೆ ಇದು ಸ್ಟಾರ್ಟರ್ಜಿನಾ?’ ಎಂದು ಸ್ಪರ್ಧಿಗಳಿಗೆ ಒಂದಾದ ಮೇಲೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಗಾಬರಿಗೊಂಡ ಸ್ಪರ್ಧಿಗಳು ಉತ್ತರ ಕೊಡಲು ಪೇಚಾಡುವಂತಾಗಿದೆ.