ವೇಶ್ಯಾಗೃಹದಲ್ಲಿ ವಾಸ: ಹೌದು, ತಮ್ಮ ಜೀವನದಲ್ಲಿ ನಡೆದ ಒಂದು ಕುತೂಹಲಕಾರಿ ಸಂಗತಿಯನ್ನು ಚಕ್ರವರ್ತಿ ಚಂದ್ರಚೂಡ್ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಹದಿ ಹರೆಯದಲ್ಲಿರುವಾಗ ಯಾವುದೋ ತಪ್ಪನ್ನು ಮಾಡಿ ಬೆಂಗಳೂರು ಬಿಟ್ಟು ಚೆನ್ನೈಗೆ ತೆರಳಿದ್ದೆ. ರೈಲು ನಿಲ್ದಾಣದಲ್ಲಿ ನಿಂತಿದ್ದ ನನ್ನನ್ನು ಕಂಡ ಕೆಲವರು ವೇಶ್ಯಾಗೃಹಕ್ಕೆ ಕೆಲಸಕ್ಕೆ ಸೇರಿದರು. ಅಲ್ಲಿ ಜೀವನದ ಯಾವುದೋ ಕೆಟ್ಟ ಗಳಿಗೆಯಲ್ಲಿ ಈ ವೃತ್ತಿಗೆ ಬಂದ ದೇವತೆಯರ ಕಷ್ಟಗಳ ದರ್ಶನವಾಯಿತು. ಅವರ ಕಷ್ಟಗಳನ್ನು ನೋಡೊದೆ. ವೇಶ್ಯೆಯೊಬ್ಬರ ಜೊತೆ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಆಕೆ ತನ್ನನ್ನು ರಕ್ಷಿಸುವಂತೆ ಕೇಳಿದಳು. ಆಮೇಲೆ ಕಸದ ಬುಟ್ಟಿಯಲ್ಲಿ ಆಕೆಯನ್ನು ಕೂರಿಸಿಕೊಂಡು ಅಲ್ಲಿಂದ ಹೊರಗೆ ಕರೆತಂದೆ.