ಆದರೆ, ಈ ಬಗ್ಗೆ ಸ್ವತಃ ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ಇಂದು ಸ್ಷಷ್ಟನೇ ನೀಡಿದ್ದು, ‘ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಸರಿಗಮಪದಿಂದ ಒಂದು ವಾರ ದೂರ ಉಳಿಯಲು ನಿರ್ಧರಿಸಿದ್ದರು. ನಾವು ಅವರ ನಿರ್ಧಾರವನ್ನು ಗೌರವಿಸಿ ವಿರಾಮ ತೆಗೆದುಕೊಳ್ಳಲುಒಪ್ಪಿಕೊಂಡಿದ್ದೆವು. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗೆ ಇರುತ್ತಾರೆ’ ಎಂದು ಹೇಳಿದ್ದಾರೆ.