ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಅಡಿ ಎತ್ತರದ ತೆಂಗಿನಕಾಯಿ ಗಣೇಶ

Last Updated 2 ಸೆಪ್ಟೆಂಬರ್ 2019, 3:42 IST
ಅಕ್ಷರ ಗಾತ್ರ

ಪ್ರತಿ ವರ್ಷ ಭಿನ್ನವಾಗಿ ಗಣೇಶ ಹಬ್ಬವನ್ನು ಆಚರಿಸುವ ಪುಟ್ಟೇನಹಳ್ಳಿ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ಈ ಬಾರಿ ತೆಂಗಿನಕಾಯಿಗಳಿಂದ 30 ಅಡಿ ಎತ್ತರದ ಗಣೇಶ ಮೂರ್ತಿ ನಿರ್ಮಿಸಿ ಗಮನಸೆಳೆದಿದೆ.

ಗಣೇಶ ನಿರ್ಮಿಸಲು 9 ಸಾವಿರ ತೆಂಗಿನ ಕಾಯಿ ಹಾಗೂ 3 ಸಾವಿರ ಎಳನೀರು ಬಳಸಲಾಗಿದೆ. ಈ ರೀತಿಯ ಹೊಸ ಪ್ರಯತ್ನಗಳು ಪರಿಸರಸ್ನೇಹಿಯಾಗಿಯೂ ಇರಬೇಕು ಎಂಬುದು ಈ ಟ್ರಸ್ಟ್‌ನ ನಂಬಿಕೆ.

ದೇವಸ್ಥಾನಕ್ಕೆ ತರಕಾರಿಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕಾರಕ್ಕೆ 21 ಬಗೆಯ ತರಕಾರಿ ಬಳಸಲಾಗಿದೆ. 50 ಮಂದಿ ಕೆಲಸಗಾರರು 21 ದಿನಗಳಿಂದ ಅಲಂಕಾರಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ.

ಹೋದ ವರ್ಷ ಈ ಸಂಸ್ಥೆ 30 ಅಡಿ ಎತ್ತರದ ಕಬ್ಬಿನ ಗಣಪತಿ ನಿರ್ಮಿಸಿತ್ತು. ಅದಕ್ಕೂ ಹಿಂದಿನ ವರ್ಷ 400 ಕೆ.ಜಿ ಹತ್ತಿಯಿಂದ ಬೃಹತ್ ಗಣೇಶನನ್ನು ನಿರ್ಮಿಸಲಾಗಿತ್ತು. ಈ ವರ್ಷ ಸೋಮವಾರದಿಂದ ಗಣೇಶನ ದರ್ಶನ ಇರಲಿದೆ.ಗಣೇಶ ದರ್ಶನಕ್ಕೆ ಬರುವ ಭಕ್ತರಿಗಾಗಿ 10 ಸಾವಿರ ಕೆ.ಜಿ ಕೇಸರಿ ಬಾತ್ ತಯಾರಿಸಿ ಪ್ರಸಾದ ನೀಡಲಾಗುತ್ತದೆ. ಇದಕ್ಕೆ 2 ಸಾವಿರ ಕೆ.ಜಿ.ಸಕ್ಕರೆ, 2 ಸಾವಿರ ಕೆ.ಜಿ ರವೆ, 1ಸಾವಿರ ಲೀಟರ್ ತುಪ್ಪ ಬಳಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

‘ತೆಂಗಿನಕಾಯಿ ಬಹಳ ಬೇಗ ಕೆಡುವುದಿಲ್ಲ. ಆದ್ದರಿಂದ ಈ ಬಾರಿ ತೆಂಗಿನಕಾಯಿ ಆಯ್ಕೆ ಮಾಡಲಾಗಿದೆ’ ಎಂದು ಟ್ರಸ್ಟಿ ರಾಮ ಮೋಹನ ರಾಜು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT