ವಿರಾಮ ಮತ್ತು ಆರಾಮ – ಇವು ವಿಮಾನಯಾನ ಕ್ಷೇತ್ರದ ಸಿಬ್ಬಂದಿಗೆ ಬೇಕಿರುವ ಪ್ರಮುಖ ಅಗತ್ಯಗಳು. ಭಾರತದ ವಿಮಾನಯಾನ ಕ್ಷೇತ್ರದಲ್ಲೀಗ ಇವುಗಳೇ ಕೊರತೆಗಳಾಗಿ ಕಾಡುತ್ತಿವೆ. ಕ್ಷೇತ್ರ ಹಿರಿದಾಗಿ ಹಿಗ್ಗುತ್ತಿದ್ದರೂ ಅದಕ್ಕೆ ತಕ್ಕ ಮೂಲಸೌಕರ್ಯ ಇಲ್ಲ. ‘ಇಂಡಿಗೊ ಬಿಕ್ಕಟ್ಟಿಗೆ ಆ ಸಂಸ್ಥೆಯೇ ಕಾರಣ’ ಎಂದು ಕೇಂದ್ರ ಸರ್ಕಾರ ದೂರಿದೆ. ಆದರೆ, ಕೇಂದ್ರವೂ ಸೇರಿದಂತೆ ಡಿಜಿಸಿಎ ಮತ್ತು ಇಂಡಿಗೊ ಕಾರ್ಯವೈಖರಿ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಇಂಡಿಗೊ ಸಂಸ್ಥೆಯ ತಪ್ಪು ಎದ್ದು ತೋರುತ್ತಿದ್ದರೂ ಇಡೀ ಕ್ಷೇತ್ರದಲ್ಲಿ ಆಡಳಿತಾತ್ಮಕವಾದ ಹಲವು ಮೂಲಭೂತ ಸಮಸ್ಯೆಗಳಿವೆ.