ದೇವೇಂದ್ರ ಫಡಣವೀಸ್ ನೇತೃತ್ವದಲ್ಲಿ ರೂಪುಗೊಂಡಿರುವ ಮಹಾರಾಷ್ಟ್ರದ ನೂತನ ಸರಕಾರ ರಚನೆಯಾದ ಬೆನ್ನಿಗೇ, ಕೆಲವೇ ದಿನಗಳಲ್ಲಿ ಬಹುಮತ ಸಾಬೀತು ಮಾಡಬೇಕಾಗಿರುವುದರಿಂದ, ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪಣ ತೊಟ್ಟಿವೆ. ಈ ಕಾರಣಕ್ಕೆ, ತಮ್ಮ ಪಕ್ಷದ ಶಾಸಕರನ್ನು ತಮ್ಮದೇ ಸರಕಾರವಿರುವ ಮಧ್ಯಪ್ರದೇಶದ ಭೋಪಾಲ್ಗೆ ಕಳುಹಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದೇ ವೇಳೆ, ಶಿವಸೇನಾ ಶಾಸಕರನ್ನು ಜೈಪುರಕ್ಕೆ ರವಾನಿಸಲು ನಿರ್ಧರಿಸಲಾಗಿದೆ.
ನವಾಬ್ ಮಲಿಕ್ ಹೇಳಿದ್ದೇನು?: 'ಹಾಜರಾತಿಗೆ ಪಡೆದ ಶಾಸಕರ ಸಹಿಗಳು ಪ್ರಮಾಣ ವಚನ ಸ್ವೀಕಾರದಲ್ಲಿ ದುರುಪಯೋಗ'