ಶುದ್ಧ ನೀರಿಗಾಗಿ ಶೋಧ: ವಿಶ್ವ ಜಲದಿನವಾದ ಗುರುವಾರ (ಮಾರ್ಚ್ 22) ಕೋಲ್ಕತ್ತದ ಕಾಳಿಘಾಟ್ನಲ್ಲಿ ಕಂಡುಬಂದ ದೃಶ್ಯವಿದು. ತ್ಯಾಜ್ಯ ತುಂಬಿ ಕೊಳಚೆಯಾಗಿರುವ ಆದಿ ಗಂಗಾ ನದಿಯಿಂದ ಮಹಿಳೆಯರು ಪಾತ್ರೆಯಲ್ಲಿ ನೀರು ತುಂಬಿಕೊಂಡರು. ವಿಶ್ವಸಂಸ್ಥೆಯು ಈ ವರ್ಷದ ವಿಶ್ವ ಜಲದಿನದವನ್ನು ‘ನೀರಿಗಾಗಿ ಪ್ರಕೃತಿ’ ಎಂದು ಘೋಷಿಸಿದೆ. 21ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ನಿಸರ್ಗದ ಸಹಾಯದಿಂದ ನೀಗಿಸುವುದು ಇದರ ಧ್ಯೇಯ –ಪಿಟಿಐ ಚಿತ್ರ