ಆದರೆ, ಇದು ಸುಳ್ಳು ಸುದ್ದಿ. ಈ ವಿಡಿಯೊ 2019ರ ಅಕ್ಟೋಬರ್ 30ರಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿದೆ. ಮೇಘಾಲಯದ ದುರ್ಗಮ ಪ್ರದೇಶದಿಂದ ಹಿಂತಿರುಗುತ್ತಿದ್ದಾಗ ಬಸ್ ಕಂದಕಕ್ಕೆ ಉರುಳಿಬಿದ್ದು, ಅದರಲ್ಲಿದ್ದ ಬಿಎಸ್ಎಫ್ ಯೋಧರು ಗಾಯಗೊಂಡಿದ್ದರು. ಆ ವಿಡಿಯೊವನ್ನು ಮನದೀಪ್ ಅವರು ಚೀನಿ ಸೈನಿಕರ ದಾಳಿ ಎಂದು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ. ಮೇಘಾಲಯದ ಬಿಎಸ್ಎಫ್ ಘಟಕದ ಮುಖ್ಯಸ್ಥರೂ, ಇದು ಅಪಘಾತದ ವಿಡಿಯೊ ಎಂದು ದೃಢಪಡಿಸಿದ್ದಾರೆ ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ.