ಕೋವಿಡ್–19ಕ್ಕೆ ಪತಂಜಲಿ ಶೋಧಿಸಿದ ಕೊರೊನಿಲ್ ಔಷಧಿಯನ್ನು ಮಾರುಕಟ್ಟೆಗೆ ಬಿಡದಂತೆ ತಡೆದಿರುವುದು ಆಯುಷ್ ಸಚಿವಾಲಯದಲ್ಲಿರುವ ಡಾ. ಮುಜಾಹಿದ್ ಹುಸೇನ್ ಎಂಬ ಅಧಿಕಾರಿ. ಪತಂಜಲಿ ಔಷಧಿಗೂ ಆಯುರ್ವೇದಕ್ಕೂ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಡಾ. ಮುಜಾಹಿದ್ ಅವರು ‘ಕೊರೊನಿಲ್’ ಮಾರಾಟಕ್ಕೆ ಅನುಮತಿ ನೀಡಲು ನಿರಾಕರಿಸಿದ್ದರು. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿಎಚ್ಪಿ ವಕ್ತಾರ ವಿಜಯ್ ಶಂಕರ್ ತಿವಾರಿ ಟ್ವೀಟ್ ಮಾಡಿದ್ದು, ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.