<p>ಕೊರೊನಾದ ಕರಾಳ ದಿನಗಳನ್ನು ಕಳೆದು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು ಎದುರುಗಾಣಲು ಸಜ್ಜಾಗುತ್ತಿದ್ದೇವೆ. ಕ್ರಿಸ್ಮಸ್ ಹಾಗೂ ಹೊಸವರ್ಷದ ರಂಗನ್ನು ಹೆಚ್ಚಿಸಲು ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಕೇಕ್ ಷೋ ಆಯೋಜಿಸಲಾಗಿದೆ. ಕಳೆದ 46 ವರ್ಷಗಳಿಂದ ನಗರದಲ್ಲಿ ನಡೆಯುತ್ತಿರುವ ಕೇಕ್ ಪ್ರದರ್ಶನದಲ್ಲಿ ವಿಭಿನ್ನ ಪರಿಕಲ್ಪನೆಯ ಕೇಕ್ಗಳು ಜನರನ್ನು ಸೆಳೆಯುತ್ತಿದ್ದವು. ಈ ಬಾರಿ ಕೇಕ್ ಪ್ರದರ್ಶನದ ವಿಶೇಷತೆ ಎಂದರೆ ಕೇಕ್ಗಳಿಗೆ ಕಲಾತ್ಮಕ ಸ್ಪರ್ಶ ನೀಡಿರುವುದು.</p>.<p>ಸಿ. ರಾಮಚಂದ್ರನ್ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕೇಕ್ ಪ್ರದರ್ಶನ ಆಯೋಜಿಸಿದ್ದರು. ಈ ಬಾರಿಯ ಕಲಾತ್ಮಕ ಕೇಕ್ಗಳ ವಿನ್ಯಾಸಕರು ಶೆಫ್ ಸ್ಯಾಮಿ ಜೆ. ರಾಮಚಂದ್ರನ್ ಅವರು. ಇವರು ‘ಶುಗರ್ ಸ್ಲ್ಕಪ್ಟ್ ಕೇಕ್ ಆರ್ಟ್’ ಸಂಸ್ಥೆಯ ನಿರ್ದೇಶಕರು. 2019ರಲ್ಲಿ ಅವರು ಕೇಕ್ ಹೀರೊ ಅವಾರ್ಡ್ ಚಾಂಪಿಯನ್ ಕೂಡ ಆಗಿದ್ದರು. ಈ ಬಾರಿ ರಾಮಚಂದ್ರನ್ ತಮ್ಮ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಜೊತೆ ಸೇರಿ 3–4 ತಿಂಗಳ ಸತತ ಶ್ರಮದ ಬಳಿಕ ಅಪರೂಪದ ಸಕ್ಕರೆ ಕಲಾಕೃತಿಗಳನ್ನು ಕೇಕ್ ಉತ್ಸವಕ್ಕಾಗಿ ಸಿದ್ಧಪಡಿಸಿದ್ದಾರೆ.</p>.<p>ಕೊರೊನಾ ವೈರಸ್, ಬಂಡೆಯ ಮೇಲೆ ಕುಳಿತಿರುವ ಸಿಂಹ, ವಾಲುತ್ತಿರುವ ಪೀಸಾ ಗೋಪುರ, ನಟರಾಜ ಮೂರ್ತಿ, ಗಂಧರ್ವ ಲೋಕ, ಡೊರೆಮನ್ ಮುಂತಾದ ಕಲಾಕೃತಿಗಳ ಕೇಕ್ಗಳು ಪ್ರದರ್ಶನದಲ್ಲಿವೆ.</p>.<p>ಈ ಕೇಕ್ ಪ್ರದರ್ಶನ ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ (ಯುಬಿ ಸಿಟಿ ಎದುರು) ನಡೆಯುತ್ತಿದೆ. ಡಿಸೆಂಬರ್ 18 ರಿಂದ ಪ್ರದರ್ಶನ ಆರಂಭವಾಗಿದ್ದು 2021ರ ಜನವರಿ 3ಕ್ಕೆ ಮುಗಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾದ ಕರಾಳ ದಿನಗಳನ್ನು ಕಳೆದು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು ಎದುರುಗಾಣಲು ಸಜ್ಜಾಗುತ್ತಿದ್ದೇವೆ. ಕ್ರಿಸ್ಮಸ್ ಹಾಗೂ ಹೊಸವರ್ಷದ ರಂಗನ್ನು ಹೆಚ್ಚಿಸಲು ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಕೇಕ್ ಷೋ ಆಯೋಜಿಸಲಾಗಿದೆ. ಕಳೆದ 46 ವರ್ಷಗಳಿಂದ ನಗರದಲ್ಲಿ ನಡೆಯುತ್ತಿರುವ ಕೇಕ್ ಪ್ರದರ್ಶನದಲ್ಲಿ ವಿಭಿನ್ನ ಪರಿಕಲ್ಪನೆಯ ಕೇಕ್ಗಳು ಜನರನ್ನು ಸೆಳೆಯುತ್ತಿದ್ದವು. ಈ ಬಾರಿ ಕೇಕ್ ಪ್ರದರ್ಶನದ ವಿಶೇಷತೆ ಎಂದರೆ ಕೇಕ್ಗಳಿಗೆ ಕಲಾತ್ಮಕ ಸ್ಪರ್ಶ ನೀಡಿರುವುದು.</p>.<p>ಸಿ. ರಾಮಚಂದ್ರನ್ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕೇಕ್ ಪ್ರದರ್ಶನ ಆಯೋಜಿಸಿದ್ದರು. ಈ ಬಾರಿಯ ಕಲಾತ್ಮಕ ಕೇಕ್ಗಳ ವಿನ್ಯಾಸಕರು ಶೆಫ್ ಸ್ಯಾಮಿ ಜೆ. ರಾಮಚಂದ್ರನ್ ಅವರು. ಇವರು ‘ಶುಗರ್ ಸ್ಲ್ಕಪ್ಟ್ ಕೇಕ್ ಆರ್ಟ್’ ಸಂಸ್ಥೆಯ ನಿರ್ದೇಶಕರು. 2019ರಲ್ಲಿ ಅವರು ಕೇಕ್ ಹೀರೊ ಅವಾರ್ಡ್ ಚಾಂಪಿಯನ್ ಕೂಡ ಆಗಿದ್ದರು. ಈ ಬಾರಿ ರಾಮಚಂದ್ರನ್ ತಮ್ಮ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಜೊತೆ ಸೇರಿ 3–4 ತಿಂಗಳ ಸತತ ಶ್ರಮದ ಬಳಿಕ ಅಪರೂಪದ ಸಕ್ಕರೆ ಕಲಾಕೃತಿಗಳನ್ನು ಕೇಕ್ ಉತ್ಸವಕ್ಕಾಗಿ ಸಿದ್ಧಪಡಿಸಿದ್ದಾರೆ.</p>.<p>ಕೊರೊನಾ ವೈರಸ್, ಬಂಡೆಯ ಮೇಲೆ ಕುಳಿತಿರುವ ಸಿಂಹ, ವಾಲುತ್ತಿರುವ ಪೀಸಾ ಗೋಪುರ, ನಟರಾಜ ಮೂರ್ತಿ, ಗಂಧರ್ವ ಲೋಕ, ಡೊರೆಮನ್ ಮುಂತಾದ ಕಲಾಕೃತಿಗಳ ಕೇಕ್ಗಳು ಪ್ರದರ್ಶನದಲ್ಲಿವೆ.</p>.<p>ಈ ಕೇಕ್ ಪ್ರದರ್ಶನ ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ (ಯುಬಿ ಸಿಟಿ ಎದುರು) ನಡೆಯುತ್ತಿದೆ. ಡಿಸೆಂಬರ್ 18 ರಿಂದ ಪ್ರದರ್ಶನ ಆರಂಭವಾಗಿದ್ದು 2021ರ ಜನವರಿ 3ಕ್ಕೆ ಮುಗಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>