ಗದ್ದುಗೆಯಲ್ಲಿ ಆರತಿ ತಟ್ಟೆಗೆ ₹2,000 ಕಾಣಿಕೆ ಹಾಕಿದ ಸಿದ್ದರಾಮಯ್ಯ ನಂತರ, ಅಲ್ಲಿಯೇ ಇದ್ದ ವಿಭೂತಿ ಭಸ್ಮ ಧರಿಸಿದರು. ಈ ವೇಳೆ, ಸ್ಥಳದಲ್ಲಿದ್ದ ಮಂದಿರದ ವಟುಗಳೊಂದಿಗೆ (ವಿದ್ಯಾರ್ಥಿಗಳು) ಚರ್ಚೆ ನಡೆಸಿದರು. ಹಿರಿಯ ವಟುವೊಬ್ಬರು ಮುಖ್ಯಮಂತ್ರಿಗೆ ಶಾಲು ಹೊದಿಸಿ ಸನ್ಮಾನಿಸಿ, ಶಿವಯೋಗ ಮಂದಿರದ ಇತಿಹಾಸ ಕುರಿತಾದ ಪುಸ್ತಕಗಳನ್ನು ನೀಡಿದರು.