ರಾಯಚೂರಿನಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಸೋಮವಾರ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಹಬ್ಬ ಆರಂಭವಾಯಿತು. ರಾಜ್ಯ ಮಟ್ಟದ ಒಂದೂವರೆ ಟನ್ ತೂಕದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜೋಡಿ ಎತ್ತುಗಳು. ಪ್ರತಿ ವರ್ಷ ರಾಸುಗಳಿಗೆ ವಿವಿಧ ಬಣ್ಣ ಬಳಿದು, ಅಲಂಕಾರಿಕ ವಸ್ತುಗಳನ್ನು ಕಟ್ಟಿ ಸಿಂಗರಿಸಲಾಗುತ್ತದೆ. ಎರಡು ವಾರ ಮುಂಚಿತವಾಗಿಯೇ ಎತ್ತು ಹಾಗೂ ಹೋರಿಗಳನ್ನು ಮನೆಯಲ್ಲಿ ಕಟ್ಟಿ ಮೇವು–ಪೌಷ್ಟಿಕ ಆಹಾರ ತಿನ್ನಿಸಿ ಕಾರ ಹುಣ್ಣಿಮೆ ದಿವಸ ಆಯೋಜಿಸುವ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅಣಿಗೊಳಿಸಲಾಗುತ್ತದೆ -ಪ್ರಜಾವಾಣಿ ಚಿತ್ರ/ ಶ್ರೀನಿವಾಸ ಇನಾಂದಾರ