ಗೋಪಾಷ್ಟಮಿ ಪ್ರಯುಕ್ತ ಶನಿವಾರ ಮಥುರಾದಲ್ಲಿ ಸ್ಥಳೀಯರು ಗೋವಿಗೆ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಕಾರ್ತೀಕ ಮಾಸ, ಶುಕ್ಲ ಪಕ್ಷದ ಎಂಟನೇ ದಿನ ಈ ಆಚರಣೆ ನಡೆಸಲಾಗುತ್ತದೆ. ಈ ದಿನ ಗೋವು ಹಾಗೂ ಕರುವನ್ನು ಶೃಂಗರಿಸಿ ಪೂಜೆ ಮಾಡಲಾಗುತ್ತದೆ. ಕೃಷ್ಣ ಬಾಲಕನಾಗಿದ್ದಾಗ ಇದೇ ದಿನ ಗೋವುಗಳನ್ನು ಮೇಯಿಸಲು ಕರೆದುಕೊಂಡು ಹೋಗಲು ಪ್ರಾರಂಭಿಸಿದ ಎಂಬ ಪ್ರತೀತಿಯಿದೆ –ಪಿಟಿಐ ಚಿತ್ರ