<p><strong>ಬೆಂಗಳೂರು:</strong> ಡೆಕ್ಸಟ್ರೋಕಾರ್ಡಿಯಾ ಎಂಬ ವಿರಳ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳುನಾಡಿನ ಬಸ್ ಕಂಡಕ್ಟರ್ ತುಳುಕ್ಕನಂ ಅವರಿಗೆ ನಾರಾಯಣ ಹೆಲ್ತ್ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.</p>.<p>ಇವರಿಗೆ ದೇಹದ ಬಲಭಾಗದಲ್ಲಿ ಹೃದಯ ಇತ್ತು. ಸಹಜ ಜೀವನ ನಡೆಸುತ್ತಿದ್ದರೂ, ಇತ್ತೀಚಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ರಕ್ತ ಪೂರೈಸುವ ನಾಳ ನೇರವಾಗಿದ್ದು, ರಕ್ತ ಸಂಚಾರಕ್ಕೆ ತೊಡಕಾಗುತ್ತಿತ್ತು. ಇದನ್ನು ಮಿಟ್ರಲ್ ಸ್ಟೆನೊಸಿಸ್ ಡೆಕ್ಸ್ಟ್ರೊಕಾರ್ಡಿಯಾ ಎಂದು ಕರೆಯಲಾಗುತ್ತದೆ.<br /> ಇದರಿಂದ ರಕ್ತ ಹೆಪ್ಪುಗಟ್ಟುವ ಹಾಗೂ ಹೃದಯದ ವೈಫಲ್ಯ ಆಗುವ ಸಾಧ್ಯತೆಯೂ ಇತ್ತು ಎಂದು ಹೃದ್ರೋಗ ತಜ್ಞ ಡಾ.ಉದಯ್ ಖಾನೋಲ್ಕರ್ ತಿಳಿಸಿದರು.</p>.<p>‘ಪರ್ಕ್ಯುಟೇನಿಯಸ್ ಬಲೂನ್ ಮಿಟ್ರಲ್ ವಾಲ್ವುಲೊಪ್ಲಾಸ್ಟಿ ಎಂಬ ಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. 2 ಲಕ್ಷದಲ್ಲಿ ಒಬ್ಬರಿಗೆ ಈ ತೊಂದರೆ<br /> ಕಾಣಿಸಿಕೊಳ್ಳುತ್ತದೆ. ಎಡಭಾಗದಲ್ಲಿ ಹೃದಯ ಇದ್ದು, ನಾಳ ನೇರವಾಗಿರುವ ಸಮಸ್ಯೆ ಇರುವವರಿಗೆ ಅದನ್ನು ಬದಲಾವಣೆ ಮಾಡುತ್ತಿದ್ದೆವು. ಬಲಭಾಗದಲ್ಲಿ ಹೃದಯ ಇರುವುದು ನಮಗೆ ಸವಾಲಾಗಿತ್ತು. ಈ ಬಾರಿ ನಾವು ಇಂಟ್ರಾ ಕಾರ್ಡಿಯಾಕ್ ಎಕೊ ಕಾರ್ಡಿಯೋಗ್ರಫಿ ಗೈಡೆನ್ಸ್ ಮೂಲಕ ಚಿಕಿತ್ಸೆ ನೀಡಿದೆವು’ ಎಂದು ವಿವರಿಸಿದರು.</p>.<p>‘ನಾನು ಮತ್ತೆ ಮೊದಲಿನಂತೆ ಗುಣಮುಖನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಸಹಜವಾದ ಜೀವನಕ್ಕೆ ಮರಳಿರುವುದು ಖುಷಿ ತಂದಿದೆ’ ಎಂದು ತುಳುಕ್ಕನಂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಡೆಕ್ಸಟ್ರೋಕಾರ್ಡಿಯಾ ಎಂಬ ವಿರಳ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳುನಾಡಿನ ಬಸ್ ಕಂಡಕ್ಟರ್ ತುಳುಕ್ಕನಂ ಅವರಿಗೆ ನಾರಾಯಣ ಹೆಲ್ತ್ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.</p>.<p>ಇವರಿಗೆ ದೇಹದ ಬಲಭಾಗದಲ್ಲಿ ಹೃದಯ ಇತ್ತು. ಸಹಜ ಜೀವನ ನಡೆಸುತ್ತಿದ್ದರೂ, ಇತ್ತೀಚಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ರಕ್ತ ಪೂರೈಸುವ ನಾಳ ನೇರವಾಗಿದ್ದು, ರಕ್ತ ಸಂಚಾರಕ್ಕೆ ತೊಡಕಾಗುತ್ತಿತ್ತು. ಇದನ್ನು ಮಿಟ್ರಲ್ ಸ್ಟೆನೊಸಿಸ್ ಡೆಕ್ಸ್ಟ್ರೊಕಾರ್ಡಿಯಾ ಎಂದು ಕರೆಯಲಾಗುತ್ತದೆ.<br /> ಇದರಿಂದ ರಕ್ತ ಹೆಪ್ಪುಗಟ್ಟುವ ಹಾಗೂ ಹೃದಯದ ವೈಫಲ್ಯ ಆಗುವ ಸಾಧ್ಯತೆಯೂ ಇತ್ತು ಎಂದು ಹೃದ್ರೋಗ ತಜ್ಞ ಡಾ.ಉದಯ್ ಖಾನೋಲ್ಕರ್ ತಿಳಿಸಿದರು.</p>.<p>‘ಪರ್ಕ್ಯುಟೇನಿಯಸ್ ಬಲೂನ್ ಮಿಟ್ರಲ್ ವಾಲ್ವುಲೊಪ್ಲಾಸ್ಟಿ ಎಂಬ ಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. 2 ಲಕ್ಷದಲ್ಲಿ ಒಬ್ಬರಿಗೆ ಈ ತೊಂದರೆ<br /> ಕಾಣಿಸಿಕೊಳ್ಳುತ್ತದೆ. ಎಡಭಾಗದಲ್ಲಿ ಹೃದಯ ಇದ್ದು, ನಾಳ ನೇರವಾಗಿರುವ ಸಮಸ್ಯೆ ಇರುವವರಿಗೆ ಅದನ್ನು ಬದಲಾವಣೆ ಮಾಡುತ್ತಿದ್ದೆವು. ಬಲಭಾಗದಲ್ಲಿ ಹೃದಯ ಇರುವುದು ನಮಗೆ ಸವಾಲಾಗಿತ್ತು. ಈ ಬಾರಿ ನಾವು ಇಂಟ್ರಾ ಕಾರ್ಡಿಯಾಕ್ ಎಕೊ ಕಾರ್ಡಿಯೋಗ್ರಫಿ ಗೈಡೆನ್ಸ್ ಮೂಲಕ ಚಿಕಿತ್ಸೆ ನೀಡಿದೆವು’ ಎಂದು ವಿವರಿಸಿದರು.</p>.<p>‘ನಾನು ಮತ್ತೆ ಮೊದಲಿನಂತೆ ಗುಣಮುಖನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಸಹಜವಾದ ಜೀವನಕ್ಕೆ ಮರಳಿರುವುದು ಖುಷಿ ತಂದಿದೆ’ ಎಂದು ತುಳುಕ್ಕನಂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>