<p><strong>ವಿಜಯಪುರ: </strong>ನಗರದ ಸಿಕ್ಯಾಬ್ ಎ.ಆರ್.ಎಸ್ ಇನಾಮದಾರಮಹಿಳಾ ಮಹಾವಿದ್ಯಾಲಯದ ಗೃಹ ವಿಜ್ಞಾನ ವಿಭಾಗದಲ್ಲಿ ಬಡವರು, ಅನಾಥರು, ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ನೀಡಿ, ಗಣ್ಯರು, ದಾನಿಗಳಿಂದ ಸಂಗ್ರಹಿಸಿದ ಹಣದಿಂದ 23 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.</p>.<p>ಪ್ರಾಧ್ಯಾಪಕ ಪ್ರೊ.ನಾಸಿರ್ ಮಾತನಾಡಿ, ‘ಸ್ಥಿತಿವಂತರು ಬಡವರ ಕಲ್ಯಾಣಕ್ಕೆ ಹಣ ಖರ್ಚು ಮಾಡುವುದು ನಿಜವಾದ ದೇವರ ಸೇವೆಯಾಗಿದೆ. ಹೊಲಿಗೆ ತರಬೇತಿ ಜತೆಗೆ ಸನ್ನಡತೆ ಕಲಿಸುವ ಸಿಕ್ಯಾಬ್ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದರು.</p>.<p>ರಾಜ್ಯ ಅಲ್ಪಸಂಖ್ಯಾತಆಯೋಗದ ಸದಸ್ಯ ರಫಿ ಭಂಡಾರಿ ಮಾತನಾಡಿ, ‘ತರಬೇತಿಯ ಜತೆಗೆ ಅನಾಥ ಹೆಣ್ಣು ಮಕ್ಕಳ ಮದುವೆ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ಕೆ ಸಿಕ್ಯಾಬ್ ಸಂಸ್ಥೆ ಮುಂದಾಗಬೇಕು’ ಎಂದು ತಿಳಿಸಿದರು.</p>.<p>ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಿಯಾಜ್ ಫಾರೂಖ್ಮಾತನಾಡಿ, ‘ಸಮಾಜದಲ್ಲಿನ ಬಡತನ, ಹಸಿವು, ದಾರಿದ್ರ್ಯವನ್ನು ಇಂಥ ಕಾರ್ಯಕ್ರಮಗಳ ಮೂಲಕ ತೊಲಗಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<p>ನಿವೃತ್ತ ಪ್ರಾಚಾರ್ಯ ಎ.ಎಂ.ಬಗಲಿ, ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿದರು.</p>.<p>ನಜೀಬ್ ಭಕ್ಷಿ, ಪ್ರೊ.ರಿಜ್ವಾನ್, ಪ್ರೊ.ಖತೀಬ್, ಪ್ರೊ.ಶಾಕಿರಾಶೇಖ್, ಡಾ.ಎಂ.ಎ.ಲಿಂಗಸೂರ, ಪ್ರೊ.ಚಿದಾನಂದ, ಪ್ರೊ.ಗಂಗಾಧರ ಭಟ್, ಪ್ರೊ.ಖಾದ್ರಿ, ಪ್ರೊ.ಎಚ್.ಕೆ.ಯಡಹಳ್ಳಿ, ಪ್ರೊ.ರಿಸಾಲ್ದಾರ್ ಸೇರಿದಂತೆ ಮತ್ತಿತರರು ಇದ್ದರು.</p>.<p>ಪ್ರಾಚಾರ್ಯ ಡಾ.ಮಹಮ್ಮದ್ ಅಪ್ಜಲ್ ಸ್ವಾಗತಿಸಿದರು. ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜೋಹರಾ ತಬಸ್ಸುಮ್ ಖಾಜಿ ನಿರೂಪಿಸಿದರು. ಮಹಮ್ಮದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ನಗರದ ಸಿಕ್ಯಾಬ್ ಎ.ಆರ್.ಎಸ್ ಇನಾಮದಾರಮಹಿಳಾ ಮಹಾವಿದ್ಯಾಲಯದ ಗೃಹ ವಿಜ್ಞಾನ ವಿಭಾಗದಲ್ಲಿ ಬಡವರು, ಅನಾಥರು, ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ನೀಡಿ, ಗಣ್ಯರು, ದಾನಿಗಳಿಂದ ಸಂಗ್ರಹಿಸಿದ ಹಣದಿಂದ 23 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.</p>.<p>ಪ್ರಾಧ್ಯಾಪಕ ಪ್ರೊ.ನಾಸಿರ್ ಮಾತನಾಡಿ, ‘ಸ್ಥಿತಿವಂತರು ಬಡವರ ಕಲ್ಯಾಣಕ್ಕೆ ಹಣ ಖರ್ಚು ಮಾಡುವುದು ನಿಜವಾದ ದೇವರ ಸೇವೆಯಾಗಿದೆ. ಹೊಲಿಗೆ ತರಬೇತಿ ಜತೆಗೆ ಸನ್ನಡತೆ ಕಲಿಸುವ ಸಿಕ್ಯಾಬ್ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದರು.</p>.<p>ರಾಜ್ಯ ಅಲ್ಪಸಂಖ್ಯಾತಆಯೋಗದ ಸದಸ್ಯ ರಫಿ ಭಂಡಾರಿ ಮಾತನಾಡಿ, ‘ತರಬೇತಿಯ ಜತೆಗೆ ಅನಾಥ ಹೆಣ್ಣು ಮಕ್ಕಳ ಮದುವೆ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ಕೆ ಸಿಕ್ಯಾಬ್ ಸಂಸ್ಥೆ ಮುಂದಾಗಬೇಕು’ ಎಂದು ತಿಳಿಸಿದರು.</p>.<p>ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಿಯಾಜ್ ಫಾರೂಖ್ಮಾತನಾಡಿ, ‘ಸಮಾಜದಲ್ಲಿನ ಬಡತನ, ಹಸಿವು, ದಾರಿದ್ರ್ಯವನ್ನು ಇಂಥ ಕಾರ್ಯಕ್ರಮಗಳ ಮೂಲಕ ತೊಲಗಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<p>ನಿವೃತ್ತ ಪ್ರಾಚಾರ್ಯ ಎ.ಎಂ.ಬಗಲಿ, ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿದರು.</p>.<p>ನಜೀಬ್ ಭಕ್ಷಿ, ಪ್ರೊ.ರಿಜ್ವಾನ್, ಪ್ರೊ.ಖತೀಬ್, ಪ್ರೊ.ಶಾಕಿರಾಶೇಖ್, ಡಾ.ಎಂ.ಎ.ಲಿಂಗಸೂರ, ಪ್ರೊ.ಚಿದಾನಂದ, ಪ್ರೊ.ಗಂಗಾಧರ ಭಟ್, ಪ್ರೊ.ಖಾದ್ರಿ, ಪ್ರೊ.ಎಚ್.ಕೆ.ಯಡಹಳ್ಳಿ, ಪ್ರೊ.ರಿಸಾಲ್ದಾರ್ ಸೇರಿದಂತೆ ಮತ್ತಿತರರು ಇದ್ದರು.</p>.<p>ಪ್ರಾಚಾರ್ಯ ಡಾ.ಮಹಮ್ಮದ್ ಅಪ್ಜಲ್ ಸ್ವಾಗತಿಸಿದರು. ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜೋಹರಾ ತಬಸ್ಸುಮ್ ಖಾಜಿ ನಿರೂಪಿಸಿದರು. ಮಹಮ್ಮದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>