ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಶುಕ್ರವಾರ, 26 ಮೇ 2023
Published 25 ಮೇ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ಹಲವು ದಿನಗಳ ಬಳಿಕ ನಿಮ್ಮ ಕುಟುಂಬದ ಹಿರಿಯ ವ್ಯಕ್ತಿಗಳನ್ನು ಭೇಟಿಯಾಗಿ ಹೊಸ ವ್ಯವಹಾರ  ಶುರುಮಾಡಲು ಆಶೀರ್ವಾದವನ್ನು ಪಡೆದುಕೊಳ್ಳುವಿರಿ.ಉತ್ತಮ ಪ್ರತಿಜ್ಞೆಗಳೊಂದಿಗೆ ಶುರುವಾದ ಕಾರ್ಯವು ಶುಭಫಲ ನೀಡುವುದು.
ವೃಷಭ
ಹೊಸ ಹೊಸ ವಿಚಾರಗಳನ್ನು ಸಹೋದರಿಯಿಂದ ಕಲಿಯಲು ಮುಂದಾಗುತ್ತೀರಿ. ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೊಸತನವನ್ನು ಕಂಡುಕೊಳ್ಳುವಿರಿ.ಹಾಸ್ಯ ಪ್ರವೃತ್ತಿಯ ನಿಮ್ಮ ವ್ಯಕ್ತಿತ್ವ ಬೇಸರದಲ್ಲಿರುವವರನ್ನು ಸಂತಸ ಪಡಿಸುತ್ತದೆ.
ಮಿಥುನ
ತಾಯಿಯಿಂದ ಕಲಿತ ಪಾಠಗಳನ್ನು  ಮುಂದಿನ ಪೀಳಿಗೆಗೆ ಕಲಿಸಿಕೊಡುವಂತಹಾ ಸಂತಸದ ದಿನಗಳಿಗೆ ಗಣನೆ  ಮಾಡುವಿರಿ. ವಯಸ್ಸಿಗೆ ಮೀರಿದ ಗಾಂಭೀರ್ಯವನ್ನು ಹೊಗಳುವವರು ಕೆಲವರಾದರೆ ತೆಗಳುವವರು ಕೆಲವರಿರುತ್ತಾರೆ.
ಕರ್ಕಾಟಕ
ಒಂದು ಕಾಯಿಲೆಗೆಂದು ತೆಗೆದುಕೊಂಡ ಔಷಧಿ  ಇನ್ನೊಂದು ಅನಾರೋಗ್ಯಕ್ಕೆ ದಾರಿಯಾಗಬಹುದು. ವಿವಿಧವಾದ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭಬರುತ್ತದೆ. ಬರೀಯ ಮೃದು ಮಾತುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ.
ಸಿಂಹ
ಪುರುಷ ಸ್ತ್ರೀಯರ ನಡುವಿನ ಅಂತರವನ್ನು  ಮನೆಯಲ್ಲಿ ಕಡಿಮೆ ಮಾಡುವ ಸರ್ವ ಪ್ರಯತ್ನ  ಮಾಡುವಿರಿ. ಮಾನಸಿಕವಾಗಿ ನಿಮ್ಮ ನಿರ್ಧಾರಗಳಲ್ಲಿ ನಿಮಗೆಸ್ಥಿರತೆ ಬರುವವರೆಗೂ ಇತರರ ಮುಂದೆ ಪ್ರಸ್ತುತಪಡಿಸಬೇಡಿ.
ಕನ್ಯಾ
ಪ್ರಸ್ತುತ ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ಪ್ರವೇಶ ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯುವಿರಿ. ಸೋದರ ಮಾವನಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.ನಿಮ್ಮ ಕೆಲಸಗಳಲ್ಲಿ ಪ್ರವೀಣತೆ ಪಡೆಯುವಿರಿ.‌. 
ತುಲಾ
ಮಗಳ ಮಾತಿಗೆ ಬೆಲೆ ಕೊಟ್ಟು ಆಕೆಯ ಇಚ್ಛೆಯಂತೆಯೇ ಆಗಲು ಬಿಟ್ಟರೂ   ಮನಸ್ಸಿಗೆ ನೋವು ಮಾಡಬಹುದು. ನಿಮ್ಮ ತೋಟದ ಫಸಲಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತರುವ ಉಪಾಯ ಮಾಡುವಿರಿ.
ವೃಶ್ಚಿಕ
ದೇವರ ಕೃಪೆಯಿಂದಾಗಿ ನಿಮ್ಮ ವ್ಯವಹಾರ ಕ್ಷೇತ್ರದಲ್ಲಿಆಗಬೇಕಾದ ಅನಾಹುತಗಳು ನಿವಾರಣೆಯಾಗುತ್ತದೆ. ಇತರರ ಮೇಲಿನ ನಿಮ್ಮ ಜವಾಬ್ದಾರಿಗಳು ಹೆಚ್ಚಾದ ಕಾರಣ  ಅನಾರೋಗ್ಯವನ್ನು ನಿರ್ಲಕ್ಷಿಸಬೇಕಾಗುತ್ತದೆ.
ಧನು
ಎಂಜಿನೀಯರ್‌ಗಳಿಗೆ ಇಂದು ಬಿಡುವಿಲ್ಲದ ದಿನವಾಗಿ ಪರಿಣಮಿಸುತ್ತದೆ. ಕೇಶವಿನ್ಯಾಸಗಾರು ಇತರರರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ತಮ್ಮನ ಮಕ್ಕಳಮದುವೆಯಲ್ಲಿ ಅತ್ಯಂತ ಹೆಚ್ಚಿನ ಓಡಾಟ ನಡೆಸುವಿರಿ.
ಮಕರ
ತಾಳಪತ್ರಗಳ ಅಧ್ಯಯನ ನಡೆಸಬೇಕೆಂದು ಇರುವವರಿಗೆ ಸರಿಯಾದ ಸ್ಥಳವು ದೊರೆಯುತ್ತದೆ. ತಾಯಿಯ ಮನೆಯ ಆಸ್ತಿಗಾಗಿ ಆಸೆ ಪಡುವುದು ಸರಿಯಲ್ಲ.ಕೃತಜ್ಞತೆಯನ್ನು ವ್ಯಕ್ತಪಡಿಸದ ವ್ಯಕ್ತಿಗಳ ಜೊತೆ ವ್ಯವಹಾರ ನಡೆಸುವುದು ಬೇಡ.
ಕುಂಭ
ಮಂಗಳ ಕಾರ್ಯಗಳು ಜರಗುವಾಗ ಅಸಾಂದರ್ಭಿಕ ಮಾತುಗಳನ್ನು ಆಡದಿರಿ. ನಿಮ್ಮದೆ ತಪ್ಪುಗಳಿರುವಾಗ ಅದನ್ನು ಸರಿಪಡಿಸುವವರ ಮೇಲೆ ಬೇಸರಮಾಡಿಕೊಳ್ಳುವುದು ಸೂಕ್ತವಲ್ಲ. ಮಿತವಾದ ಆಹಾರ ಸೇವನೆ ಇರಲಿ.
ಮೀನ
ಜೀವನದ ಅತ್ಯಂತ ಪ್ರಮುಖ ಘಟ್ಟವೊಂದರಲ್ಲಿ  ಅನಾರೋಗ್ಯದಿಂದಾಗಿ ಸರಿಯಾದ ರೀತಿಯಲ್ಲಿ ಆ ಕ್ಷಣವನ್ನು ಅನುಭವಿಸಲು ಆಗುವುದಿಲ್ಲ. ಕೆಲವರು ಮಾಡುವಅನಾಹುತ ನಿಲ್ಲಿಸದೇ ಬೇರೆಯ ಹಾದಿ ಇಲ್ಲವಾಗಿರುತ್ತದೆ.