ದಿನ ಭವಿಷ್ಯ: ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ..
Published 24 ಫೆಬ್ರುವರಿ 2026, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಾಧಾನ ದೊರೆತು ಹಂತ ಹಂತವಾಗಿ ಅನುಕೂಲ ವಾತಾವರಣದ ಅನುಭವ ದೊರಕಲಿದೆ. ಸದುದ್ದೇಶ ಕಾರಣದಿಂದ ಕೆಲಸವನ್ನು ಗೌಪ್ಯವಾಗಿ ನಿರ್ವಹಿಸಬೇಕಾಗುವುದು.
ವೃಷಭ
ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕಬಹುದು.
ಮಿಥುನ
ಕೆಲಸಕ್ಕೆ ಇನ್ನೊಂದು ಕೆಲಸ ಜೊತೆ ಜೊತೆಗೂಡಿ ಮುಕ್ತಾಯದ ಹಂತ ತಲುಪಲು ಸಾಧ್ಯವಾಗುವುದಿಲ್ಲ. ಆತ್ಮೀಯರ ಮತ್ತು ಬಂಧುವರ್ಗದವರ ಸಹಾಯ ಸ್ವೀಕರಿಸಿ.
ಕರ್ಕಾಟಕ
ಬರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಷಯ. ಗೃಹ ಬಳಕೆಯ ಸಾಮಗ್ರಿ ಖರೀದಿಯಿಂದ ಸಂತಸವಾಗಲಿದೆ. ಮಕ್ಕಳಿಂದ ಸೌಖ್ಯವಿರುವುದು.
ಸಿಂಹ
ಈವರೆಗೂ ಕೂಡಿಟ್ಟ ಶ್ರಮದ ಠೇವಣಿ ಹಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬೇಕಾಗುವುದು. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
ಕನ್ಯಾ
ನಿಯಮ ಉಲ್ಲಂಘನೆ ಮಾಡುವ, ದಬ್ಬಾಳಿಕೆ ನಡೆಸುವ ರೀತಿನೀತಿಯನ್ನು ಬದಲಿಸಿಕೊಳ್ಳಿ. ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ.
ತುಲಾ
ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವ ತೀರ್ಮಾನ ಅಭಿವೃದ್ಧಿಗೆ ಕಾರಣವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಕುಟುಂಬದವರೂ ಸಂತಸ ಪಡುತ್ತಾರೆ.
ವೃಶ್ಚಿಕ
ಇಬ್ಬನಿಯಲ್ಲಿ ನೆನೆಯುವುದು ಅಥವಾ ನಿಮ್ಮ ದೇಹಕ್ಕೆ ಅಹಿತಕರ ಕೆಲವು ಕೆಲಸದ ಕಾರಣದಿಂದ ಜ್ವರ ಬರಬಹುದು. ಕುಟುಂಬದ ಸದಸ್ಯರಲ್ಲಿ ಆದಷ್ಟು ತಾಳ್ಮೆ-ಸಮಾಧಾನದಿಂದ ವರ್ತಿಸಿ.
ಧನು
ವ್ಯವಹಾರದಲ್ಲಿ ಅದರಲ್ಲೂ ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ತಪ್ಪುಗಳಾಗದಂತೆ ಜಾಗರೂಕತೆ ವಹಿಸಿರಿ. ಯೋಗ ಹೇಳಿಕೊಡುವ ಶಿಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯವಾಗುತ್ತದೆ.
ಮಕರ
ಮನೆ ನಿರ್ಮಾಣದ ಕಾರ್ಯ ಅಡ್ಡಿ-ಆತಂಕಗಳಿಲ್ಲದೆ ಸರಾಗವಾಗಿ ನಡೆಯಲಿದೆ. ಯೋಚನೆಗಿಂತ ಅಧಿಕ ಮಟ್ಟದಲ್ಲಿ ಹಣ ವ್ಯಯವಾಗುತ್ತದೆ. ಕುಟುಂಬದ ಸದಸ್ಯರ ಜತೆ ಸಮಯ ಕಳೆಯಲಿದ್ದೀರಿ.
ಕುಂಭ
ಸ್ವಂತ ಉದ್ಯೋಗಿಗಳಿಗೆ ಬರುವ ನೂತನ ಯೋಚನೆಗಳನ್ನು ಕೈ ಬಿಟ್ಟು ಈಗಿನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಿ.ನಿಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುದು ತಿಳಿದು ಬರಲಿದೆ.
ಮೀನ
ಅನೇಕ ದಿನಗಳಿಂದ ಸೇವಿಸುತ್ತಿರುವ ಅಪಥ್ಯದ ಆಹಾರದ ಪರಿಣಾಮವಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲಿವೆ. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚುತ್ತದೆ.