ದಿನ ಭವಿಷ್ಯ: ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ
Published 1 ಫೆಬ್ರುವರಿ 2026, 0:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೀವು ಖರೀದಿಸಿದ ನಿವೇಶನ ಈಗ ಮಾರುವುದಾದರೆ ಉತ್ತಮ ಬೆಲೆಗೆ ಮಾರಾಟ ಆಗುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ.
ವೃಷಭ
ಉದ್ಯೋಗದಲ್ಲಿ ನಿಮ್ಮೊಂದಿಗೆ ಸೆಣಸಾಡಲು ಬಂದವರನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ . ನಿಮ್ಮ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಎದುರಾದರೂ ಅದು ಕ್ಷಣ ಮಾತ್ರದ್ದಾಗಿರುತ್ತದೆ.
ಮಿಥುನ
ಮೈಬಣ್ಣದ ಕಾರಣಕ್ಕೆ ಸಂಬಂಧದಲ್ಲಾಗಲಿ, ವ್ಯವಹಾರದಲ್ಲಾಗಲಿ ಯಾರನ್ನೂ ಕಡೆಗಣಿಸಬೇಡಿ. ಆರೋಗ್ಯಕ್ಕಿಂತ ಹಣ ಮುಖ್ಯ ಎನ್ನುವ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು.
ಕರ್ಕಾಟಕ
ನೀವು ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪದೇ ಇರುವುದರಿಂದ ಹಿಡಿದಂತಹ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ.
ಸಿಂಹ
ವಿದ್ಯಾರ್ಥಿಗಳು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವಿರಿ. ಬಂದಂತಹ ಫಲಿತಾಂಶವು ನಿರೀಕ್ಷೆಗಿಂತ ಹೆಚ್ಚಿನ ಸಂತೋಷವನ್ನು ನೀಡುವುದು.
ಕನ್ಯಾ
ಮನೆಯಲ್ಲಿನ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ನೀವು ಪ್ರತಿಯೊಂದು ರೂಪಾಯಿಯನ್ನು ಖರ್ಚು ಮಾಡುವಾಗ ಅನೇಕ ಬಾರಿ ಯೋಚಿಸುವಿರಿ. ಲೇಖಕರಿಗೆ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ.
ತುಲಾ
ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹೋದರನಲ್ಲಿ ಹೇಳಿಕೊಂಡಾಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಹಾಯ ದೊರೆಯಲಿದೆ. ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಬರಲಿದೆ.
ವೃಶ್ಚಿಕ
ನಿಮ್ಮ ಕೆಲಸಗಳಿಗೆ ಹೆಚ್ಚಿನ ಸಾಮಾಜಿಕ ಸಹಕಾರ ಸಿಗುವುದು. ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗುವುದು ಲಾಭವನ್ನು ತರಲಿದೆ. ಮದುವೆಯ ನಿಮಿತ್ತವಾಗಿ ಒಡವೆಗಳ ಖರೀದಿ ಮಾಡುವಿರಿ.
ಧನು
ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಏಕೆಂದರೆ ನಿಮ್ಮ ಮೇಲಿರುವ ವಿಶ್ವಾಸದಿಂದಾಗಿ ಹಲವಾರು ಅವಕಾಶಗಳು ನಿಮ್ಮದಾಗಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಯ ಕರೆಯೋಲೆ ಬರಬಹುದು.
ಮಕರ
ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರವನ್ನು ಮಾಡುವವರಿಗೆ ರಫ್ತು ಕಾರ್ಯದಲ್ಲಿ ಕೆಲವು ತಾಪತ್ರಯಗಳು ಕಾಣಿಸಿಕೊಳ್ಳಲಿವೆ. ಅನಾವಶ್ಯಕವಾಗಿ ಯಾರನ್ನೂ ಟೀಕಿಸುವುದು ಸರಿಯಲ್ಲ.
ಕುಂಭ
ಅಚ್ಚುಕಟ್ಟಾದ ಕೆಲಸಗಳಿಂದ ಮೇಲಾಧಿಕಾರಿಗಳಿಗೆ ನಿಮ್ಮ ಮೇಲಿನ ವಿಶ್ವಾಸ ಹೆಚ್ಚಲಿದೆ. ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ ಕೊಂಡಲ್ಲಿ ಯಶಸ್ಸು ಪಡೆಯುವಿರಿ.
ಮೀನ
ಹಣಕಾಸು ಸಂಸ್ಥೆಗಳನ್ನು ನಡೆಸುವವರಿಗೆ ನಷ್ಟ ಸಂಭವಿಸಲಿದೆ. ಆಫೀಸಿನ ಕಾರ್ಯದಲ್ಲಿ ಎಲ್ಲರ ಮಾತನ್ನು ತಾಳ್ಮೆಯಿಂದ ಕೇಳಿ. ಮಗನ ಪ್ರಬುದ್ಧತೆಯಿಂದ ನಿಮ್ಮ ಹೆಗಲ ಭಾರ ಕಡಿಮೆಯಾಗುತ್ತದೆ.