ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿ.10 – ಈ ರಾಶಿಯವರು ಧರ್ಮಸಂಕಟದಲ್ಲಿ ಸಿಲುಕಲಿದ್ದಾರೆ
Published 9 ಡಿಸೆಂಬರ್ 2023, 22:58 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಾನಾ ಬಗೆಯ ಚಿಂತನೆಗಳು ಕಾರ್ಯರೂಪಕ್ಕೆ ಬರುವಂತೆ ನಿಮ್ಮನ್ನು ಹುರಿದುಂಬಿಸಲಿದೆ. ಆದರೆ ಆಕಸ್ಮಿಕವಾಗಿ ಮಾಡುವ ಕೆಲಸದಿಂದ ಧರ್ಮಸಂಕಟದಲ್ಲಿ ಸಿಲುಕುವಂತಾಗಲಿದೆ. ಸಂಜೆ ಸಮಯದಲ್ಲಿ ಸಣ್ಣ ವಿಹಾರಕ್ಕೆ ತೆರಳುವಿರಿ.
ವೃಷಭ
ನಿಮ್ಮ ಮುಂದಿನ ಜೀವನದ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯ ಪ್ರಸಂಗ ಎದುರಾಗುವುದು. ಆತ್ಮ ಗೌರವ, ರಕ್ಷಣೆ ದೃಷ್ಟಿಯಿಂದ ತಪ್ಪುಗಳನ್ನು ಮಾಡಬೇಕಾದ ಪರಿಸ್ಥಿತಿ ಬರುವುದು.
ಮಿಥುನ
ನೃತ್ಯ ಕಲಿಕೆಯಂತಹ ಇತರೆ ಚಟುವಟಿಕೆಯಲ್ಲಿನ ಆಸಕ್ತಿಯಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯುವ ಪರಿಸ್ಥಿತಿ ಬರಲಿದೆ. ಹಲವು ಅಪರೂಪದ ಅವಕಾಶಗಳಿಂದ ವರ್ಚಸ್ಸನ್ನು ಬೆಳೆಸಿಕೊಳ್ಳುವಿರಿ. ನೇಕಾರರಿಗೆ ಉತ್ತಮ ದಿನ.
ಕರ್ಕಾಟಕ
ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷಿಸುವವರಿಗೆ ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನೂತನ ಕೆಲಸ ಸಂಪಾದನೆಯಲ್ಲಿ ಅನುಕೂಲವಾಗಲಿದೆ. ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಸಿದ್ಧಿಸಲಿದೆ.
ಸಿಂಹ
ಸ್ವಯಂಕೃತ ಅಪರಾಧದಿಂದ ಇಂದಿನ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಸಂಚಾರದ ವೃತ್ತಿಯಲ್ಲಿ ಅಧಿಕ ಶ್ರಮ ಮತ್ತು ಜವಾಬ್ದಾರಿಗಳಿದ್ದರೂ ಅದಕ್ಕೆ ತಕ್ಕಂತಹ ಪ್ರತಿಫಲವನ್ನು ಹೊಂದುವಿರಿ.
ಕನ್ಯಾ
ನಿಮ್ಮ ಮನೋಭಿಲಾಷೆಯಂತೆ ಸಂಘ ಸಂಸ್ಥೆಗಳ ಅಧಿಕಾರ ಪ್ರಾಪ್ತಿಯಾಗಲಿದೆ. ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಗಳಿಂದ ಅಧಿಕ ಲಾಭ ಗಳಿಸುವಿರಿ. ಕುಟುಂಬದಲ್ಲಿ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವಿರಿ.
ತುಲಾ
ಅತ್ಯಂತ ಬುದ್ಧಿವಂತರಾದ, ತಿಳುವಳಿಕೆ ಹೊಂದಿವರಾದ ನೀವು ಇಂದು ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಉಂಟಾಗಲಿದೆ.
ವೃಶ್ಚಿಕ
ಆತ್ಮವಿಶ್ವಾಸದಿಂದ ಹೊಸ ಯೋಜನೆ ಆರಂಭಿಸುವಿರಿ. ಜವಾಬ್ದಾರಿಗಳನ್ನು ಇತರರಿಗೆ ವಹಿಸಿ ಆರಾಮವಾಗಿರಲು ತೀರ್ಮಾನಿಸುವುದು ಉತ್ತಮ. ನಗದು ವ್ಯವಹಾರವನ್ನು ಮಾಡುವಲ್ಲಿ ಮೋಸ ಹೋಗುವ ಸಾಧ್ಯತೆಗಳಿದೆ.
ಧನು
ರಾಜಕೀಯ ಕ್ಷೇತ್ರದಲ್ಲಿ ಇರುವವರು ಈ ದಿನ ಪಕ್ಷ ಬಲಪಡಿಸಲು, ಅನುಯಾಯಿಗಳನ್ನು ಸಂಪಾದಿಸಿಕೊಳ್ಳಲು ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ. ತಂದೆಯವರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ.
ಮಕರ
ನಿಶ್ಚಿತ ರೂಪದಲ್ಲಿ ಮತ್ತು ನಿಶ್ಚಿತ ಸಮಯಕ್ಕೆ ಸರಿಯಾಗಿ ಕೆಲಸಗಳು ಜರುಗಲಿವೆ. ಕೃಷಿ ವರ್ಗದವರಿಗೆ ಹೆಚ್ಚಿನ ಕೆಲಸಗಳು ಪ್ರಾರಂಭವಾಗುವುದು. ಸಿವಿಲ್ ಇಂಜಿನೀಯರ್‌ಗಳು ಬಳಸುವ ತಂತ್ರಜ್ಞಾನದಲ್ಲಿ ಹೆಚ್ಚಿನ ಗಮನವಿರಲಿ.
ಕುಂಭ
ಖರ್ಚಿಗೆ ಅನೇಕ ಹೊಸ ದಾರಿಗಳು ಹುಟ್ಟುಕೊಳ್ಳುವುದರಿಂದ ಅನಗತ್ಯ ವಸ್ತು ಖರೀದಿಸುವುದನ್ನು ಕಡಿಮೆ ಮಾಡುವುದು ಉತ್ತಮ. ಗೃಹ ನಿರ್ಮಾಣದ ಕೆಲಸವನ್ನು ಆರಂಭಿಸಲು ಸೂಕ್ತ ಸಮಯವನ್ನು ತಿಳಿದುಕೊಳ್ಳುವಿರಿ.
ಮೀನ
ಅಸಾಧ್ಯ ಕಾರ್ಯಗಳನ್ನೂ ಸಹ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಆ ಛಲವನ್ನು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಿರಿ. ಲೆಕ್ಕ ಪರಿಶೋಧಕರಿಗೆ ಆದಾಯದಿಂದ ತೃಪ್ತಿ ಉಂಟಾಗುವುದು.