ದಿನ ಭವಿಷ್ಯ: ಈ ರಾಶಿಯವರಿಗೆ ಬಂಧುಗಳ ಮಾತಿನಿಂದ ನೋವಾಗಬಹುದು
Published 7 ಫೆಬ್ರುವರಿ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹಚರರಿಂದ ಅಥವಾ ಅಧಿಕಾರಿಗಳಿಂದ ನಿಮಗೆ ಅಸಹಕಾರದ ಪರಿಸ್ಥಿತಿ ಎದುರಾಗಬಹುದು. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಕಂಡುಕೊಳ್ಳುವ ಸ್ಥಿತಿ ಬರಲಿದೆ. ಋಣ ಪರಿಹಾರವಾಗಿ ನೆಮ್ಮದಿ ಮೂಡುವುದು.
ವೃಷಭ
ಜಾಹೀರಾತು ಏಜೆನ್ಸಿಯಲ್ಲಿರುವವರಿಗೆ ಏಳಿಗೆ ಹಾಗೂ ಪ್ರಚಾರ ತರುವ ಸೂಕ್ತ ವಿಚಾರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಆತ್ಮಾಭಿಮಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ.
ಮಿಥುನ
ದುಬಾರಿ ವಸ್ತುಗಳನ್ನು ಖರೀದಿಸುವ ಹಾಗೂ ಅದರ ಅವಶ್ಯಕತೆಯ ಕುರಿತು ನಿಮ್ಮ ಮನೆಯವರೊಂದಿಗೆ ಚರ್ಚಿಸಿ ಬಳಿಕ ಖರೀದಿಸಿ. ದಿನಗೂಲಿ ಕೆಲಸವನ್ನು ಮಾಡುವವರಿಗೆ ಈ ದಿನ ಸ್ವಲ್ಪ ಅಸ್ಥಿರತೆ ಕಾಡಬಹುದು.
ಕರ್ಕಾಟಕ
ಕಲಾವಿದರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗುವುವು. ಸಂಸಾರದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಿ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ.
ಸಿಂಹ
ಅಕ್ಕಪಕ್ಕದವರ ಅಥವಾ ಸ್ನೇಹಿತರ ಹೊಗಳಿಕೆಯ ಮಾತುಗಳಿಗೆ ಕಿವಿಗೊಟ್ಟು ಮರುಳಾಗಬೇಡಿ. ಬಂಧುಗಳ ಮಾತು ಮನಸ್ಸನ್ನು ನೋಯಿಸುವುದು. ಅದರಿಂದಾಗಿ ಮನಸ್ಸು ನಿರಾಸಕ್ತಿಯ ಭಾವನೆಯಿಂದ ಇರುವುದು.
ಕನ್ಯಾ
ಸಹೋದರಿಯ ಮದುವೆಯಂತಹ ಸಂದರ್ಭಕ್ಕೆ ಆಪ್ತರೊಬ್ಬರು ನೆರವಿಗೆ ಬರಲಿದ್ದಾರೆ. ಆಸ್ತಿ ಕೊಳ್ಳುವ ವಿಷಯದಲ್ಲಿ ಹೆಂಡತಿಯೊಂದಿಗೆ ಮಾತುಕತೆ ನಡೆಸಿ. ಹಿರಿಯ ಸಹೋದ್ಯೋಗಿಗಳಿಂದ ಬೈಗುಳ ಕೇಳಬೇಕಾಗುವುದು.
ತುಲಾ
ನಿಮ್ಮ ಮನಃಸ್ಥಿತಿಯು ಯಾರೊಂದಿಗೂ ಬೆರೆಯದೆ, ಕೆಲಸ ಕಾರ್ಯಗಳ ತ್ತಲೇ ಇರುವುದು. ಮಕ್ಕಳ ಭವಿಷ್ಯದ ಕುರಿತಾಗಿ ಆಳವಾದ ಚಿಂತನೆ ನಡೆಸುವಿರಿ. ಪರರಿಗೆ ಸಹಾಯ ಮಾಡುವ ಮನೋಭಾವದಿಂದ ಮುನ್ನಡೆ ಇರುವುದು.
ವೃಶ್ಚಿಕ
ಆಪ್ತರ ಕಷ್ಟಗಳ ಕಡೆಗೆ ಗಮನ ಹರಿಸುವುದು ಪುಣ್ಯದ ಕೆಲಸವೆಂದು ಭಾವಿಸಿ, ಹೊರತಾಗಿ ಪ್ರತಿಫಲವನ್ನು ಅಪೇಕ್ಷಿಸಬೇಡಿ. ಅಂದುಕೊಂಡಿರುವ ಕೆಲಸಗಳು ಉತ್ತಮವಾಗಿ ನೆರವೇರಿವುದರಿಂದ ನೆಮ್ಮದಿ ಇರುವುದು.
ಧನು
ಸಿಹಿ ವಿಚಾರವನ್ನು, ಅವಕಾಶಗಳನ್ನು ಮತ್ತು ಕಹಿಯ ಸಂಗತಿಯನ್ನು ಮುಕ್ತ ಮನಸ್ಸಿನಿಂದ ಸಮಾನವಾಗಿ ಸ್ವೀಕರಿಸಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರಾಗುವುವು.
ಮಕರ
ನಿಮ್ಮ ಅಭಿರುಚಿಗೆ ಹೊಂದುವಂತಹ ಜನರೊಂದಿಗೆ ಒಡನಾಟ ಬೆಳೆಸಿ ನೆಮ್ಮದಿ ಸಿಗುತ್ತದೆ. ಕಾರಣಾಂತರದಿಂದ ಇಂದು ಕೆಲವು ವ್ಯಕ್ತಿಗಳನ್ನು ನಿರ್ಲಕ್ಷಿ ಸುವಿರಿ. ಚರ್ಮದ ವಸ್ತು ವ್ಯಾಪಾರಿಗಳಿಗೆ ಲಾಭದಾಯಕ ದಿನ.
ಕುಂಭ
ಐ.ಟಿ. ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ. ಅದರ ಪರಿಣಾಮವಾಗಿ ವರಮಾನ ಹೆಚ್ಚಳದ ಸಂಭವವು ಇರುವುದು. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ.
ಮೀನ
ಇಂಟೀರಿಯರ್ ಡೆಕೊರೇಟರ್ ಕೋರ್ಸ್ ಕಲಿಯುವಂತಹ ಆಸೆ ಹೊಂದಿದವರಿಗೆ ಶುಭ ಕಾಲ. ಸಗಟು ಧಾನ್ಯ ವರ್ತಕರಿಗೆ ಈ ದಿನ ಲಾಭ ಹೆಚ್ಚಿರುವುದು. ಸೋದರನ ಓದಿಗಾಗಿ ಖರ್ಚು ಮಾಡಬೇಕಾಗುವುದು.