ದಿನ ಭವಿಷ್ಯ: ಈ ರಾಶಿಯವರು ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ ಇದೆ
Published 17 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹಳ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿ ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆಯಿದೆ ಜಾಗ್ರತರಾಗಿರಿ. ದಂತ ವೈದ್ಯರಿಗೆ ಲಾಭದಾಯಕ ದಿನ.
ವೃಷಭ
ವಿರೋಧಿಗಳು ಇಂದು ರಾಜಿಯಾಗಲು ಬರುವಂಥ ಸನ್ನಿವೇಶಗಳು ನಡೆಯಲಿವೆ. ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕುವ ಯೋಚನೆ ಸರಿಯಾದ ಮಾರ್ಗವಾಗಿರುತ್ತದೆ.
ಮಿಥುನ
ಗೆಳೆಯರ ಗುಂಪಿನಲ್ಲಿ ಮಿತ್ರತ್ವ ಹಾಗು ಶತ್ರುತ್ವ ಹೊಂದಿದವರು ಇರುತ್ತಾರೆಂಬುದನ್ನು ಮರೆಯದಿರಿ. ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತಾಗಲಿದೆ. ಕ್ರೀಡೆ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಲಿದೆ.
ಕರ್ಕಾಟಕ
ತೆರೆ ಮರೆಯಲ್ಲಿ ನಡೆಯುತ್ತಿರುವ ಸಂಚನ್ನು, ರಾಜಕೀಯ ಚಟುವಟಿಕೆಗಳನ್ನು ಆಪ್ತರೊಬ್ಬರ ಮೂಲಕವಾಗಿ ತಿಳಿದುಕೊಳ್ಳುವಿರಿ. ದೃಷ್ಟಿಕೋನ ವಿಶಾಲವಾಗಿರುವುದರಿಂದ ವ್ಯವಹಾರ ಸುಗಮವಾಗಿ ನಡೆಯುವುದು.
ಸಿಂಹ
ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರಲ್ಲಿ ದಿನವಿಡೀ ಚರ್ಚಿಸಿದರೂ ತೀರ್ಮಾನಕ್ಕೆ ಬರುವುದು ಕಷ್ಟಕರ. ತಂದೆಯವರ ಆರೋಗ್ಯ ತಪಾಸಣೆ ನಡೆಸಿ.
ಕನ್ಯಾ
ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ವಿಮಾ ಯೋಜನೆಗಳಿಂದ ಲಾಭ ಪಡೆದುಕೊಳ್ಳುವಿರಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ.
ತುಲಾ
ಯೋಜನೆಗಳು ಅರ್ಧದಲ್ಲಿಯೇ ನಿಂತಿರುವುದರಿಂದ ಆಗಿದ್ದ ನಿರಾಸೆಯು ಆತ್ಮವಿಶ್ವಾಸದಿಂದ ಪುನಃ ಸಕಾರಾತ್ಮಕ ತಿರುವು ಪಡೆದುಕೊಳ್ಳಲಿದೆ. ಗ್ರಂಥ ಪಾಲಕರ ಹುದ್ದೆಗೆ ಅಭ್ಯರ್ಥಿಯಾಗುವುದರಿಂದ ಶುಭವಾಗುವುದು.
ವೃಶ್ಚಿಕ
ಗುತ್ತಿಗೆಯನ್ನು ನೀಡುವ ಮೊದಲು ಎಲ್ಲ ದಾಖಲೆ ಪತ್ರಗಳಲ್ಲಿ ಸೂಕ್ತ ಸಹಿ ಪಡೆದುಕೊಳ್ಳಲು ಮರೆಯದಿರಿ. ಆಲಸ್ಯದಿಂದಾಗಿ ಕೆಲಸಗಳನ್ನು ಮುಂದೂಡದೆ ಪೂರ್ಣಗೊಳಿಸಲು ಪ್ರಯತ್ನಿಸಿ.
ಧನು
ಆಶ್ಚರ್ಯ ಮೂಡುವಂಥ ಘಟನೆ ಬದುಕಲ್ಲಿ ಈ ದಿನ ನಡೆಯಲಿದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬಹಳ ಮುಖ್ಯ.
ಮಕರ
ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಸಂಸಾರದ ಜವಾಬ್ದಾರಿಯನ್ನು ಉತ್ತಮವಾಗಿ ನೋಡಿಕೊಳ್ಳುವ ಬಗ್ಗೆ ಗಮನವಿರಲಿ. ಕಲಹವನ್ನು ಉಂಟುಮಾಡುವ ವಿಚಾರಗಳನ್ನು ನಿಯಂತ್ರಿಸುವ ಜಾಣ್ಮೆ ನಿಮ್ಮಲ್ಲಿರಲಿ.
ಕುಂಭ
ಸೋಮಾರಿತನ ಇಲ್ಲದೆ ದುಡಿಯಿರಿ, ಆದರೆ ಸಂಪಾದನೆಯ ಮಾರ್ಗ ದೇವರು ಮೆಚ್ಚುವ ರೀತಿಯಲ್ಲಿ ಸತ್ಯವಾಗಿರಲಿ.ಸಣ್ಣ ಪುಟ್ಟ ಸಮಸ್ಯೆಯನ್ನು ಹೊರತುಪಡಿಸಿ ಆರೋಗ್ಯ, ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆ.
ಮೀನ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ, ಇರುವ ಅವಕಾಶಗಳನ್ನು ಮುಂದುವರಿಸಿ. ಬುದ್ಧಿವಂತಿಕೆ ಪ್ರದರ್ಶಿಸಿ. ದಿನಚರಿಯಲ್ಲಿ ಸಂತೋಷ, ಉಲ್ಲಾಸ ಅತಿಯಾಗಿ ಇರುತ್ತದೆ.