ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ದೂರದ ಪ್ರಯಾಣಗಳಿಗೆ ಕಡಿವಾಣ ಹಾಕಿ
Published 21 ಏಪ್ರಿಲ್ 2024, 19:21 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈದ್ಯ ವೃತ್ತಿಯಲ್ಲಿರುವವರಿಗೆ ಹೃದಯ ವಿದ್ರಾವಕ ರೋಗಿಯೊಬ್ಬರು ಭೇಟಿಯಾಗುವ ಸಾಧ್ಯತೆ ಇದೆ. ಸೂಕ್ಷ್ಮಗ್ರಹಿಯಾದ ನೀವು ಮುಂದಿನ ಆತಂಕ ಕಂಡುಕೊಳ್ಳಲಿದ್ದೀರಿ. ನಿಮ್ಮ ಪ್ರತಿಭೆ ಈ ದಿನ ಬೆಳಕಿಗೆ ಬರಲಿದೆ.
ವೃಷಭ
ನಿರಂತರ ಕೆಲಸ ಕಾರ್ಯಗಳಿಂದಾಗಿ ದಣಿದ ನಿಮಗೆ ಈ ದಿನ ಸಿಗಲಿರುವ ಸ್ವಲ್ಪಮಟ್ಟಿನ ಬಿಡುವು ಆರಾಮವೆನಿಸಲಿದೆ. ಸದ್ಗುರುವಿನ ದರ್ಶನದಿಂದ ಮನಸ್ಸಿನಲ್ಲಿರುವ ಪ್ರಶ್ನೆಗೆ ಉತ್ತರ ಸಿಗಲಿದೆ. ಇಂದೇ ಭೇಟಿ ಮಾಡಿ.
ಮಿಥುನ
ರೈತಾಪಿ ವರ್ಗದವರಿಗೆ ಉಸಿರುಗಟ್ಟಿಸುವಂತಹ ಸಂದರ್ಭವಿದ್ದಲ್ಲಿ ಅದನ್ನು ನಿವಾರಿಸಲು ಸರಿಯಾದ ಸಮಯದಲ್ಲಿ ಸ್ನೇಹಿತರೊಬ್ಬರು ಬರಲಿದ್ದಾರೆ. ದೂರದ ಪ್ರಯಾಣಗಳಿಗೆ ಆದಷ್ಟು ಕಡಿವಾಣ ಹಾಕಿ.
ಕರ್ಕಾಟಕ
ಗೆಳೆಯರ ಸವಾಲಿನಲ್ಲಿ ಸದಾ ವಿಜಯ ನಿಮ್ಮದೇ ಆಗಿರುವುದರಿಂದ ಬೇಸರವಿಲ್ಲದೆ ಸಂತಸದಿಂದ ಇರುವಿರಿ. ದುಶ್ಚಟಗಳಿಗೆ ಒಳಗಾಗಿ ಅದರಿಂದ ಹೊರಬರಬೇಕೆಂದು ಇರುವವರು ಇಂದೇ ಪ್ರಯತ್ನ ಆರಂಭಿಸಿ.
ಸಿಂಹ
ದೊಡ್ಡ ಮಟ್ಟದ ಲೋಕಕಲ್ಯಾಣಾರ್ಥವಾಗಿ ನಡೆಸುವ ಧಾರ್ಮಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಾಯ ಹಾಗೂ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.
ಕನ್ಯಾ
ದೀರ್ಘಕಾಲೀನ ಯೋಜನೆಗಳು ಫಲದಾಯಕವಾಗಿ ವೃತ್ತಿಪರರಿಗೆ ಕಾರ್ಯರಂಗದಲ್ಲಿ ಪ್ರಗತಿ ನೀಡಲಿವೆ. ನಿಮ್ಮ ವ್ರತ ಹಾಗೂ ಅನುಷ್ಠಾನದ ಫಲವಾಗಿ ನಿಮ್ಮ ಮಕ್ಕಳಿಗೆ ಶ್ರೇಯಸ್ಸಾಗುವುದು ಅನುಭವಕ್ಕೆ ಬರುತ್ತದೆ.
ತುಲಾ
ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವಿಶ್ವಾಸಿಗಳಿಂದ ವೈದ್ಯರ ಸಂಪರ್ಕಕ್ಕೆ ನೆರವು ಸಿಗಲಿದೆ. ಉನ್ನತ ಶಿಕ್ಷಣ ಪಡೆದವರು ಓದಿಗೆ ತಕ್ಕಂಥ ಕೆಲಸ ನಿರೀಕ್ಷಿಸುತ್ತಿದ್ದರೆ ಸದ್ಯ ಸಿಗುವುದು ಕಷ್ಟ.
ವೃಶ್ಚಿಕ
ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಅವಗಢಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಓಡುತ್ತಿರುವ ಪ್ರಪಂಚದೊಂದಿಗೆ ನೀವೂ ಸಹ ಓಡಲು ಪ್ರಯತ್ನಿಸುವುದು ಉತ್ತಮ.
ಧನು
ನಿಮ್ಮದೇ ಸಂಸ್ಥೆಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೊಸ ಸಂಸ್ಥೆಯ ಸ್ಥಾಪನೆ ಮಾಡಿದ್ದನ್ನು ನೋಡಿ ಅಸೂಯೆ ಪಡಬೇಡಿ. ನೀವು ಆಪ್ತರಲ್ಲಿಟ್ಟ ನಂಬಿಕೆಯು ಸುಳ್ಳಾಗುವ ಸಂದರ್ಭ ಬರಬಹುದು.
ಮಕರ
ಈಗ ನಿರ್ಮಾಣವಾಗಿರುವ ನಿಮ್ಮ ಸಂಚಾರಿ ಪ್ರವೃತ್ತಿಯನ್ನು ನಿಗದಿತ ವೇಳಾಪಟ್ಟಿ ಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಬಹುದು. ಇಂದು ನಿಮಗೆ ನಿರ್ಜಲೀಕರಣದಂತಹಾ ಸಮಸ್ಯೆಗಳು ಕಾಡಬಹುದು.
ಕುಂಭ
ದುರ್ಜನರು, ದುರಾಚಾರಿಗಳಿಂದ ಉಂಟಾಗಬಹುದಾದ ಅಪಾಯದ ಸೂಚನೆ ಇದ್ದರೆ ಈ ತಕ್ಷಣವೇ ಮುನ್ನೆಚ್ಚರಿಕೆ ವಹಿಸುವುದು ಹೆಚ್ಚು ಸೂಕ್ತ. ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ.
ಮೀನ
ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕೆಂದು ಯೋಚಿಸುತ್ತಿರುವ ವ್ಯಕ್ತಿಗಳಿಗೆ ಸಹಾಯದ ನೆರವು ಸಿಗಲಿದೆ. ಪ್ರಲೋಭನಗೆ ಒಳಗಾಗಿ ಪಾಲುದಾರರಿಗಾಗಲಿ ಸಹೋದ್ಯೋಗಿಗಳಿಗಾಗಲಿ ಮೋಸ ಮಾಡುವ ಯೋಚನೆ ಬೇಡ.